ನೆಲಮಂಗಲ: ನಿರಂತರವಾಗಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ನೆಲಮಂಗಲ ನಗರದ ಎಂ.ಜಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ನೀರು ತುಂಬಿ ಹರಿಯುವ ರಸ್ತೆಗಳಲ್ಲಿ ಶಾಲಾ, ಕಾಲೇಜ್ನಿಂದ ವಾಪಾಸ್ ಆಗುವ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಫಜೀತಿ ಅನುಭವಿಸಿದ್ದಾರೆ.
ಅರಿಶಿನಕುಂಟೆ ಸರ್ವಿಸ್ ರಸ್ತೆ, ಅಂಡರ್ ಪಾಸ್ ಬಳಿ ರಾಜಕಾಲುವೆ ಮೂಲಕ ಹರಿವ ಮಳೆ ನೀರಿನಿಂದ ಹೆದ್ದಾರಿ ರಸ್ತೆ ಸಂಪೂರ್ಣ ಮುಳುಗಿದೆ. ವಾಹನ ದಟ್ಟಣೆಯಿಂದ ಮುಂದೆ ಸಾಗಲಾಗದೆ ವಾಹನ ಸವಾರರು ಪರಾದಾಡುವಂತಾಗಿತ್ತು.
ಅಲ್ಲದೆ ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರದ ಚಿಕ್ಕಬಾಣಾವರ, ಅಬ್ಬಿಗೆರೆ ಸೇರಿದಂತೆ ನೆಲಮಂಗಲ ತಾಲ್ಲೂಕಿನ ಹಲವೆಡೆ ವರುಣಾರ್ಭಟ ಹೆಚ್ಚಾಗಿದ್ದು, ಕೆರೆ ಕುಂಟೆ, ಕಾಲುವೆಗಳಿಂದ ಮಳೆ ನೀರು ತುಂಬಿ ಬಡಾವಣೆಯ ರಸ್ತೆಗಳು ಕೆರೆಯಂತಾಗಿದೆ. ಒಟ್ಟಾರೆ ವರುಣಾರ್ಭಟಕ್ಕೆ ಸಾಕಷ್ಟು ಅವಾಂತರಗಳು ಎದುರಾಗಿದ್ದು, ಜನರು ನಲುಗಿ ಹೋಗಿದ್ದಾರೆ.
PublicNext
22/10/2024 10:40 pm