ಟಿ.ದಾಸರಹಳ್ಳಿ: ಸಿಲಿಕಾನ್ ಸಿಟಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಮತ್ತು ಉತ್ತರ ತಾಲ್ಲೂಕಿನ ಹಲವೆಡೆ ವರುಣಾರ್ಭಟಕ್ಕೆ ಜನರು ತತ್ತರಿಸಿದ್ದಾರೆ. ನಿರಂತ ಮಳೆಯಿಂದಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಿದರಕಲ್ಲು ಸರ್ವಿಸ್ ರಸ್ತೆ ಪಕ್ಕದಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ಹೋಗುವ ರಾಜಕಾಲುವೆ ಮೇಲೆ ಹಾಕಿರುವ ಕಾಂಕ್ರೀಟ್ ಸೇತುವೆ ಕುಸಿದು ಬಿದ್ದಿದೆ.
ಪ್ರತಿದಿನ ಈ ಸರ್ವಿಸ್ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡಲಿದ್ದು, ಸದ್ಯ ಸೇತುವೆ ಕುಸಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದೊಂದಿಗೆ ಕುಸಿದು ಬಿದ್ದ ಸೇತುವೆಯನ್ನ ತೆರವುಗೊಳಿಸುತ್ತಿದ್ದಾರೆ.
PublicNext
22/10/2024 10:33 pm