ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ರವಿವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಧಾರಾಕಾರ ಮಳೆಯಿಂದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬಸರಿಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ.
ರಾತ್ರಿಯಿಡಿ ಸುರಿದ ಮಳೆಯಿಂದ ಮನೆಗಳ ಒಳಗೆ ನೀರು ನುಗ್ಗಿದೆ. ರಸ್ತೆಗಳು ಕೆರೆಗಳಂತಾಗಿದ್ದು ಜನರು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಮನೆಯೊಳಗೆ ನುಗ್ಗಿದ ಮಳೆನೀರನ್ನು ಹೊರಗೆ ಹಾಕುವುದೇ ಗ್ರಾಮಸ್ಥರ ಕೆಲಸವಾಗಿದೆ.
ಈ ಮಧ್ಯ ರಾಣೆಬೆನ್ನೂರು ತಾಲೂಕಿನ ನೂಕಾಪುರದಲ್ಲಿ ಸಿಡಿಲು ಬಡೆದು ಹೋರಿ ಸಾವನ್ನಪ್ಪಿದೆ. ಹಾಲೇಶ್ ಕುಂಬಾರಿ ಎಂಬ ರೈತನಿಗೆ ಸೇರಿದ ಹೋರಿ ಇದಾಗಿದೆ. ಸುಮಾರು ೭೦ ಸಾವಿರ ರೂಪಾಯಿ ಬೆಲೆಬಾಳುವ ಹೋರಿ ಸಾವನ್ನಪ್ಪಿದ್ದು ರೈತನಿಗೆ ತೀವ್ರ ನಷ್ಟವಾಗಿದೆ.
PublicNext
21/10/2024 01:39 pm