ಹಾವೇರಿ: ಮಗನ ಸಾವಿನ ಸುದ್ದಿ ಕೇಳಿ ತಂದೆ ಸಹ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. 38 ವರ್ಷದ ವಿನಯ ಗುಂಡಗಾವಿ ಹೃದಯಾಘಾತದಿಂದ ಸಾವನ್ನಪ್ಪಿದ ಮಗ. 68 ವರ್ಷದ ವೀರಭದ್ರ ಗುಂಡಗಾವಿ ಮಗನ ಸಾವಿನ ಕೇಳಿ ಸಾವನ್ನಪ್ಪಿದ ತಂದೆ.
ವಿನಯ ಬಿಎಎಂಎಸ್ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಮಗ ವಿನಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಹುಬ್ಬಳ್ಳಿಗೆ ತೆರಳಲು ಮುಂದಾದ ತಂದೆ ವೀರಭದ್ರ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವೀರಭದ್ರ ಸಹ ಎಂಬಿಬಿಎಸ್ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಹಾವೇರಿ ನಗರದ ಬಸವೇಶ್ವರ ನಗರದಲ್ಲಿ ತಂದೆ ಮಗನ ಶವ ಒಂದೇ ಕಡೆ ಅಂತಿಮ ದರ್ಶನಕ್ಕೆ ಇಡಲಾಗಿದೆ.
PublicNext
22/10/2024 03:10 pm