ಹಾವೇರಿ: ಮುಂಜಾನೆ ಮಳೆ ನೀರಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಬಾಲಕ ನಿವೇದನ್ ಶವದ ಮರಣೋತ್ತರ ಪರೀಕ್ಷೆಯ ನಂತರ ಮನೆಗೆ ತರಲಾಯಿತು. ಬಾಲಕನ ಮೃತದೇಹ ಮನೆಗೆ ತರುತ್ತಿದ್ದಂತೆ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.
ಬಾಲಕನ ಮೃತದೇಹಕ್ಕೆ ಕಣ್ಣೀರು ಸುರಿಸುತ್ತಲೇ ತಂದೆ ಬಸವರಾಜ್ ಅಂತಿಮ ಪೂಜೆ ಸಲ್ಲಿಸಿದರು. ನಂತರ ಆಂಬ್ಯುಲೆನ್ಸ್ ನಲ್ಲಿ ನಿವೇದನ್ ಶವವನ್ನ ಮುಕ್ತಿಧಾಮಕ್ಕೆ ತರಲಾಯಿತು.
ಕುರುಬ ಸಮುದಾಯದ ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಬಾಲಕ ನಿವೇದನ್ ಸಾವಿಗೆ ಸಂಬಂಧಿಕರು ಪೋಷಕರು, ನೆರೆದ ಸಾವಿರಾರು ಜನ ಕಂಬನಿ ಮಿಡಿದರು.
PublicNext
17/10/2024 07:39 pm