ಹಾವೇರಿ : ಹಾವೇರಿ ನಗರದಲ್ಲಿ ಮಳೆ ನೀರಿಗೆ ಬಾಲಕ ಕೊಚ್ಚಿ ಹೋದ ಘಟನೆ ನಡೆದಿದೆ. ಕೊಚ್ಚಿಹೋದ ಬಾಲಕನನ್ನ 12 ವರ್ಷದ ನಿವೇದನ ಬಸವರಾಜ್ ಗುಡಗೇರಿ ಎಂದು ಗುರುತಿಸಲಾಗಿದೆ. ನಗರದ ಎಸ್ಪಿ ಕಚೇರಿ ಮುಂದೆ ರಸ್ತೆ ಕಾಣದೆ ಚರಂಡಿಯಲ್ಲಿ ಬಿದ್ದು ನಿವೇದನ ಕೊಚ್ಚಿ ಹೋಗಿದ್ದ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಶೋಧ ಕಾರ್ಯ ಆರಂಭಿಸಿದ್ರು. ಕಳೆದ ರಾತ್ರಿಯಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಸ್ತೆಗಳು ಕೆರೆಗಳಂತಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಮಗು ನೀರಿನಲ್ಲಿ ಕೊಚ್ಚಿಹೋದ ವಿಷಯ ತಿಳಿಯುತ್ತಿದ್ದಂತೆ ಬಾಲಕನ ಮನೆಯಲ್ಲಿ ತೀವ್ರ ಆತಂಕ ವ್ಯಕ್ತವಾಗಿತ್ತು. ಪೋಷಕರು ಬಾಲಕ ಬದುಕಲೆಂದು ಸಾಕಷ್ಟು ಪ್ರಾರ್ಥನೆ ಮಾಡಿದ್ರು ವಿಧಿಯಾಟ ನಿವೇದನ ಬಾರದ ಲೋಕಕ್ಕೆ ಪಯಣಿಸಿದ್ದಾನೆ.
ಇಂದು ಬೆಳಿಗ್ಗೆ ಬಾಲಕ ಪತ್ತೆಯಾಗುತ್ತಿದ್ದಂತೆ ಕಣ್ಣು ಮಿಟುಕಿಸಿದ್ದಾನೆ ಎನ್ನುವ ಮಾಹಿತಿ ಮೆರೆಗೆ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ರು ನಿವೇದನ್ ಬದುಕುಳಿಯಲಿಲ್ಲ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
17/10/2024 12:08 pm