ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: "ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನಿರಪರಾಧಿ" ಎಂದ ಸಚಿವ ಮುನಿಯಪ್ಪ

ಕೋಲಾರ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ. ನಿರಪರಾಧಿಯಾದ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು‌ ಕೇಂದ್ರ ಸರ್ಕಾರ ಬಹಳಷ್ಟು ಪ್ಲ್ಯಾನ್ ಮಾಡುತ್ತಾ ಇದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.‌

ಕೋಲಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ 136 ಶಾಸಕರು, ಇಡೀ ಕಾಂಗ್ರೆಸ್ ಪಾರ್ಟಿಯೇ ಅಧ್ಯಕ್ಷರ‌ ನೇತೃತ್ವದಲ್ಲಿ ಒಟ್ಟಾಗಿ ಇದ್ದೇವೆ. ಅವರನ್ನು ಯಾರೂ ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದಕ್ಕೆ ಆಗುವುದಿಲ್ಲ‌. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ‌ ಎಂದರು.

Edited By : Shivu K
PublicNext

PublicNext

20/10/2024 09:33 pm

Cinque Terre

35.88 K

Cinque Terre

5

ಸಂಬಂಧಿತ ಸುದ್ದಿ