ಕೆಜಿಎಫ್ : ಬಿಜಿಎಂಎಲ್ ಮುಚ್ಚಿದ ಮೇಲೆ ಗಣಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಇದುವರೆಗೂ ನೀಡದ ಕೇಂದ್ರ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಎಐಯುಎಫ್ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಅಖಿಲ ಭಾರತ ಯುವ ಜನ ಫೆಡರೇಷನ್ ತಾಲ್ಲೂಕು ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.
ಬಿಜಿಎಂಎಲ್ ಮುಚ್ಚಿದ ಮೇಲೆ ಈಗ ಬೆಮಲ್ ಕೂಡ ಅವನತಿಯ ದಾರಿ ತುಳಿದಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಖಾಯಂ ಉದ್ಯೋಗ ನೀಡುವ ಬದಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಆಸಕ್ತಿ ತೋರಿದ್ದಾರೆ.
ಇದರಿಂದಾಗಿ ಯುವಕರು ಖಾಯಂ ಉದ್ಯೋಗ -ವಿಲ್ಲದೆ ಅಲ್ಪ ಸಂಬಳಕ್ಕೆ ದುಡಿಯುವ ಅನಿವಾರ್ಯತೆ ಎದುರಾಗಿದೆ ಎಂದು ಆರೋಪಿಸಿದರು.
PublicNext
22/10/2024 07:51 pm