ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : 'ಗಣಿ ಕಾರ್ಮಿಕರಿಗೆ ಕೇಂದ್ರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ' - AIUF ರಾಜ್ಯ ಘಟಕದ ಅಧ್ಯಕ್ಷ ಹರೀಶ್

ಕೆಜಿಎಫ್ : ಬಿಜಿಎಂಎಲ್ ಮುಚ್ಚಿದ ಮೇಲೆ ಗಣಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಇದುವರೆಗೂ ನೀಡದ ಕೇಂದ್ರ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಎಐಯುಎಫ್ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಅಖಿಲ ಭಾರತ ಯುವ ಜನ ಫೆಡರೇಷನ್‌ ತಾಲ್ಲೂಕು ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.

ಬಿಜಿಎಂಎಲ್ ಮುಚ್ಚಿದ ಮೇಲೆ ಈಗ ಬೆಮಲ್ ಕೂಡ ಅವನತಿಯ ದಾರಿ ತುಳಿದಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಖಾಯಂ ಉದ್ಯೋಗ ನೀಡುವ ಬದಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಆಸಕ್ತಿ ತೋರಿದ್ದಾರೆ.

ಇದರಿಂದಾಗಿ ಯುವಕರು ಖಾಯಂ ಉದ್ಯೋಗ -ವಿಲ್ಲದೆ ಅಲ್ಪ ಸಂಬಳಕ್ಕೆ ದುಡಿಯುವ ಅನಿವಾರ್ಯತೆ ಎದುರಾಗಿದೆ ಎಂದು ಆರೋಪಿಸಿದರು.

Edited By : PublicNext Desk
PublicNext

PublicNext

22/10/2024 07:51 pm

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ