ಶಿವಮೊಗ್ಗ : ವಿಜಯದಶಮಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಆರ್.ಎಸ್.ಎಸ್. ಪಥಸಂಚಲನ ನಡೆಸಿದೆ. ವಿಜಯದಶಮಿ ಹಿನ್ನೆಲೆಯಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸಿದ್ದು, ನಗರದ ಕರ್ನಾಟಕ ಸಂಘದ ಆವರಣದಿಂದ ಪಥ ಸಂಚಲನ ಆರಂಭವಾಯಿತು.
ಭಗವಧ್ವಜರೋಹಣ ನೆರವೇರಿಸಿ ಆರಂಭವಾದ ಪಥಸಂಚಲನದಲ್ಲಿ ಬ್ಯಾಂಡ್ ತಾಳಕ್ಕೆ ಗಣವೇಷಧಾರಿಗಳು ಹೆಜ್ಜೆ ಹಾಕಿದರು. ಸುರಿವ ಮಳೆ ನಡುವೆಯೇ ಗಣವೇಷಧಾರಿಗಳು, ಲಾಠಿ ಹಿಡಿದು ಹೆಜ್ಜೆ ಹಾಕಿದರು. ಸುರಿಯುವ ಮಳೆಯನ್ನು ಲೆಕ್ಕಿಸದೆ ಎಂ.ಪಿ. ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಚನ್ನಬಸಪ್ಪ ಕೂಡ ಹೆಜ್ಜೆ ಹಾಕಿದರು.
ಜೋರಾಗಿ ಸುರಿಯುತ್ತಿದ್ದ ಮಳೆ ನಡುವೆಯೇ, ಖಾಕಿ ಪ್ಯಾಂಟ್, ಬಿಳಿ ಅಂಗಿ ಧರಿಸಿ, ಲಾಠಿ ಹಿಡಿದ ಹೊರಟ ಪಥಸಂಚಲನ, ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿತು. ಇನ್ನು ನಗರದ ಕರ್ನಾಟಕ ಸಂಘದಿಂದ ಮೈಲಾರಲಿಂಗೇಶ್ವರ ದೇವಾಲಯದವರೆಗೆ ಪಥಸಂಚಲನ ಸಾಗಿದ್ದು ವಿಶೇಷವಾಗಿತ್ತು
PublicNext
20/10/2024 09:29 pm