ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡಗೋಡ: ದೇವಸ್ಥಾನದಲ್ಲಿ ಕಳ್ಳತನ - ಪೊಲೀಸ್ ಬೆರಳಚ್ಚು, ಶ್ವಾನದಳ ತಂಡ ಸ್ಥಳಕ್ಕೆ ಭೇಟಿ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಸಮೀಪದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಯಾರೋ ಕಳ್ಳರು ಕೈಚಳಕ ತೋರಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿದ್ದ ಹುಂಡಿಯಿಂದ 2000 ರೂಪಾಯಿ ನಗದು, 4 ಸೀರೆ, 15 ರೂಪಾಯಿ ಮೌಲ್ಯದ ಎಂಪ್ಲಿಫೈಯರ್‌ನ್ನು ಕಳ್ಳರು ಕದ್ದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಸಿ.ಪಿ.ಐ. ರಂಗನಾಥ ನೀಲಮ್ಮನವರ್, ಪಿ.ಎಸ್.ಐ. ಪರಶುರಾಮ ಮಿರ್ಜಗಿ ಮತ್ತು ಪಿ.ಎಸ್.ಐ. ಕುಡಗುಂಟಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರವಾರ ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Edited By : Vijay Kumar
PublicNext

PublicNext

19/10/2024 01:08 pm

Cinque Terre

11.6 K

Cinque Terre

0

ಸಂಬಂಧಿತ ಸುದ್ದಿ