ಹಳಿಯಾಳ: ಹಳಿಯಾಳ ಪಟ್ಟಣದ ವಿ.ಆರ್ ದೇಶಪಾಂಡೆ ರಸ್ತೆಯಲ್ಲಿರುವ ಖಾಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲೆ ಇರುವ ಗದಿಗೆಪ್ಪ ಬಸವೇಶ್ವರ ಖಾನಾವಳಿ ಸೇರಿದಂತೆ ಅಕ್ಕಪಕ್ಕದ ಮಳಿಗೆಗಳಿಗೂ ಹಾನಿಯಾಗಿದೆ.
ಘಟನೆ ತಿಳಿದ ಬಳಿಕ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
Kshetra Samachara
19/10/2024 11:39 am