ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ - ಸಚಿವ ಮಂಕಾಳ ವೈದ್ಯ

ಕಾರವಾರ: ಲೋಕಸಭೆ ಚುನಾವಣೆಯಿಂದ ತೆರವಾದ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರರಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ಕಾರವಾರದಲ್ಲಿ ವರದಿಗಾರರೊದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ಮೂರು ಕ್ಷೇತ್ರಗಲ್ಲಿಯೂ ಕಾಂಗ್ರೆಸ್ ಗೆಲ್ಲುವ ಭರವಸೆ ಇದೆ. ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಪಕ್ಷದ ಆದೇಶದಂತೆ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇವೆ. ಎಲ್ಲಿಗೆ ಯಾರು ಹೋಗಬೇಕು ಎಂದು ಈವರೆಗೆ ತಿಳಿಸಿಲ್ಲ. ಅಭ್ಯರ್ಥಿಗಳ ಘೋಷಣೆಯ ಬಳಿಕ ಪ್ರಚಾರ ಕಾರ್ಯದ ಬಗ್ಗೆ ತಿಳಿಯಲಿದೆ ಎಂದರು.

ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯ ವರ್ಗಾವಣೆಯ ಕುರಿತು ಮಾತನಾಡಿ, ಕಳೆದ 20 ದಿನಗಳಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕುರ್ಚಿ ಖಾಲಿ ಇದೆ. ಆದರೆ ಇದೇನು ಹೊಸದಲ್ಲ. ಹಿಂದೆ ತಿಂಗಳುಗಳ ಕಾಲ ಖಾಲಿ ಕುರ್ಚಿ ಇತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಇಲ್ಲದೇ ಯಾರಿಗೂ ಸಮಸ್ಯೆಯಾಗಿಲ್ಲ. ಜಿಲ್ಲಾಡಳಿತದ ಕಾರ್ಯಗಳು ನಡೆಯುತ್ತಲೇ ಇವೆ. ಜಿಲ್ಲೆಗೆ ವರ್ಗಾವಣೆಯಾದವರು ಶೀಘ್ರವೇ ಅಧಿಕಾರಿ ಸ್ವೀಕರಿಸಬಹುದು ಎಂದರು.

Edited By : Vijay Kumar
PublicNext

PublicNext

19/10/2024 07:45 am

Cinque Terre

16.23 K

Cinque Terre

0

ಸಂಬಂಧಿತ ಸುದ್ದಿ