ಮುಂಡಗೋಡ : ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ಇಂದು ಮುಂಡಗೋಡದ ಪ್ರವಾಸಿ ಮಂದಿರಕ್ಕೆ ಭೇಟಿ ಕೊಟ್ಟಿದ್ದಾರೆ.. ಈ ಸಾರ್ವಕನಿಕರ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಾರದ ತಹಶೀಲ್ದಾರ್ಗೆ ಫೋನ್ ಮಾಡಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜನರು ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ಕೊಡಲು ಬಂದಾಗ ಸ್ಥಳದಲ್ಲಿರದೇ ಎಲ್ಲಿ, ಹೋಗಿದ್ದೀರಾ,, ನಾನು ಪರಿಶೀಲಿಸಲು ಬಂದಿದ್ರೂ, ನೀವು ಇಲ್ಲ, ನಾನೇನು ಇಲ್ಲಿ ದನ ಕಾಯಲು ಬಂದಿದ್ದೀನಾ..? ಜನರ ಸೇವೆಗೆ ಬರದೇ ಎಲ್ಲಿ ಹೋಗಿದ್ದೀರಾ ಎಂದು ಖಾರವಾಗಿ ದೇಶಪಾಂಡೆ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.
PublicNext
15/10/2024 06:21 pm