ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ದೇವಾಲಯಗಳ ನಗರ ಬಾರಕೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆ

ಬ್ರಹ್ಮಾವರ: ತುಳುನಾಡ ರಾಜಧಾನಿ 365 ದೇವಾಲಯಗಳ ನಗರ ಬಾರಕೂರು ನಗರ ಮಧ್ಯಭಾಗ ಎನಿಸಿದ 4 ರಸ್ತೆಗಳ ಕೇಂದ್ರ ಸ್ಥಳ ಕಲ್ಲು ಚಪ್ಪರದಿಂದ ಮಂದಾರ್ತಿ ತಿರುವಿನ ತನಕ ಪ್ರತೀ ಕ್ಷಣ ವಾಹನ ದಟ್ಟಣೆಯಿಂದ ಸಂಚಾರಕ್ಕೆ ತೀರಾ ಸಂಕಷ್ಟ ಎನಿಸಿದ್ದು ರಸ್ತೆ ಅಗಲೀಕರಣಕ್ಕೆ ಒತ್ತಾಯ ಕೇಳಿ ಬಂದಿದೆ.

ಉಡುಪಿಯಿಂದ ಬಾರಕೂರು ಮೂಲಕ ಶಿವಮೊಗ್ಗ ಸಾಗರ ಕೊಕ್ಕರ್ಣೆ ಮಂದಾರ್ತಿ ಮತ್ತು ಬೆಣ್ಣೆಕುದ್ರು ಮೂಲಕ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ತೀರಾ ಹತ್ತಿರದ ಸಂಪರ್ಕ ಕಲ್ಪಿಸುವ ಬಾರಕೂರು ಮುಖ್ಯ ಭಾಗದಲ್ಲಿ ರಸ್ತೆ ಅಗಲೀಕರಣವಾಗದೆ ಪ್ರತೀ ಕ್ಷಣ ಸಂಚಾರದಲ್ಲಿ ತೊಡಕಾಗಿರುತ್ತದೆ.

ಇಲ್ಲಿನ ಹಲವಾರು ದೇವಸ್ಥಾನದಲ್ಲಿರುವ ಕಲ್ಯಾಣ ಮಂದಿರದಲ್ಲಿ ನಡೆಯುವ ಶುಭ ಸಮಾರಂಭ ಉತ್ಸವ ಹೊರೆ ಕಾಣಿಕೆಗಳ ಸಮಯದಲ್ಲಿ ಮತ್ತಷ್ಟು ವಾಹನ ದಟ್ಟಣೆ ಹೆಚ್ಚುತ್ತೆ. ಆಂಬ್ಯುಲೆನ್ಸ್ ಅಥವಾ ಅತೀ ತುರ್ತು ಸಂದರ್ಭದಲ್ಲಿ 2 ವಾಹನ ಸಂಚಾರ ಮಾಡಲಾಗದಷ್ಟು ಇಕ್ಕಟ್ಟು ಜಾಗ ಇರುವ ಕಾರಣ ಬದಲಿ ಸಂಚಾರ ರಸ್ತೆ ಇರದೆ ಪ್ರತಿಕ್ಷಣ ಸಂಚಾರದಲ್ಲಿ ಅಡಚಣೆ ಆಗುತ್ತಿರುವ ಕಾರಣ ಆದಷ್ಟು ಶೀಘ್ರದಲ್ಲಿ ಮುಖ್ಯ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಬೇಕಾಗಿದೆ.

Edited By : Vinayak Patil
Kshetra Samachara

Kshetra Samachara

18/10/2024 04:58 pm

Cinque Terre

1.75 K

Cinque Terre

1

ಸಂಬಂಧಿತ ಸುದ್ದಿ