ಮಂಗಳೂರು: ಅಂಗಡಿಯ ಬಾಗಿಲು ಮುರಿದ ಇಬ್ಬರು ಅಪ್ರಾಪ್ತ ಬಾಲಕರಿಬ್ಬರು ಕಳವು ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹೊಸಂಗಡಿಯಲ್ಲಿ ನಡೆದಿದೆ.
ಹೊಸಂಗಡಿ ಸೇತುವೆಯ ಬಳಿ ಇರುವ ಜಯರಾಜ್ ಅಂಚನ್ ಎಂಬವರ ವಿಷ್ಣುರಾಜ್ ಜನರಲ್ ಸ್ಟೋರ್ಗೆ ನುಗ್ಗಿದ ಈ ಅಪ್ರಾಪ್ತ ವಯಸ್ಕ ಇಬ್ಬರು ಕಳ್ಳರು ಕಳ್ಳತನ ನಡೆಸಿದ್ದಾರೆ. ಮೊದಲು ಅಂಗಡಿಯ ಮುಂಭಾಗದಲ್ಲಿದ್ದ ಲೈಟ್ ಅನ್ನು ಒಡೆದು ಹಾಕಿದ್ದಾರೆ. ಬಳಿಕ ಅಂಗಡಿಯ ಬಾಗಿಲು ಒಡೆದು ಒಳ ನುಗ್ಗಿದ್ದ ಇಬ್ಬರು ಅಂಗಡಿಯಲ್ಲಿದ್ದ 15 ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ. ಕಳ್ಳರ ಕರಾಮತ್ತು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಳ್ಳರ ಚಹರೆಯೂ ಪತ್ತೆಯಾಗಿದೆ.
ಇದೇ ಬಾಲಕರು ಮೂಡುಬಿದಿರೆ ಹಾಗೂ ಉಜಿರೆಯಲ್ಲೂ ಇದೇ ರೀತಿ ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿರೋದು ಅಲ್ಲಿನ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PublicNext
17/10/2024 10:39 pm