ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ ಭಾರೀ ಮಳೆ ಸ್ಥಳಕ್ಕೆ ಶಾಸಕ ಸಿ.ಸಿ.ಪಾಟೀಲ್ ಭೇಟಿ

ನರಗುಂದ : ನರಗುಂದ ತಾಲ್ಲೂಕಿನಲ್ಲಿ ನಿನ್ನೆ ತಡ ರಾತ್ರಿ ಸುರಿದ ಮಳೆಗೆ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಸಿ.ಸಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತಾಲ್ಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಹರಿಯುತ್ತಿರುವ ಬೆಣ್ಣೆ ಹಳ್ಳದ ಪ್ರವಾಹ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನರಗುಂದ ಹಾಗೂ ಗದಗ ಮಾರ್ಗ ಬಂದ್ ಹಾಗಿದೆ. ಸ್ಥಳದಲ್ಲಿ ನರಗುಂದ ತಹಶೀಲ್ದಾರರು ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು. ಇನ್ನು ಗ್ರಾಮದ ಜನರಿಗೆ ನದಿಯ ಪಕ್ಕದಲ್ಲಿನ ಜಮೀನುಗಳಿಗೆ ಕೆಲಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದು ಪ್ರವಾಹ ಹಿನ್ನೆಲೆ ಅಗತ್ಯ ಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ತಹಶೀಲ್ದಾರರಿಗೆ ಶಾಸಕ ಸಿ.ಸಿ.ಪಾಟೀಲ್ ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

17/10/2024 09:39 am

Cinque Terre

7.68 K

Cinque Terre

0

ಸಂಬಂಧಿತ ಸುದ್ದಿ