ಬೆಂಗಳೂರು: ಆಕೆ ಖತರ್ನಾಕ್ ಕಿಲಾಡಿ ಲೇಡಿ. ಪೊಲೀಸರೇನಾದ್ರು ಅರೆಸ್ಟ್ ಮಾಡಲು ಬಂದರೆ ಆಕೆ ಮಾಡುತ್ತಿದ್ದ ಪ್ಲಾನ್ ನೋಡಿ ಪೊಲೀಸರೇ ಬೇಸತ್ತು ಹೋಗಿದ್ದಾರೆ. ಬಸ್ಗಳಲ್ಲಿ ಅಥವಾ ಒಂಟಿ ಮಹಿಳೆಯರು ಸಿಕ್ಕರೆ ಅವರ ಜೊತೆಗೆ ಮಾತಿಗೆ ಇಳಿಯುತ್ತಿದ್ದ ಲೇಡಿ ಪರಿಚಯ ನಂತರ ಬ್ಯಾಗ್ನಿಂದ ಮಂಪರು ಬರೋ ಔಷಧಿ ಮಿಕ್ಸ್ ಮಾಡಿರೋ ಜ್ಯೂಸ್ ಕೊಡುತ್ತಿದ್ದಳು. ಬೇಡ ಬೇಡ ಅಂದ್ರೂ ಬಲವಂತ ಮಾಡಿ ಜ್ಯೂಸ್ ಕೊಡುತ್ತಿದ್ದಳು. ಜ್ಯೂಸ್ ಕುಡಿದು ಮಂಪರಿಗೆ ಜಾರುತ್ತಿದ್ದಂತೆ ಚಿನ್ನಾಭರಣವನ್ನ ದೋಚಿ ಅಲ್ಲಿಂದ ಪರಾರಿಯಾಗುತ್ತಿದ್ದಳು.
ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ ವೇಳೆ ಮತ್ತೊಂದು ಮಹಾ ನಾಟಕ ಆಡಿದ್ದಾಳೆ. ಪೊಲೀಸರು ಆಕೆಯನ್ನ ಅರೆಸ್ಟ್ ಮಾಡಿದರೆ ಏನು ಮಾಡಬೇಕು ಎಂಬುದು ಆಕೆ ಮೊದಲೆ ಮಾಡಿಕೊಂಡಿರ್ತಾಳೆ.ಚಾಕೊಲೇಟ್ನ ನಡುವೆ ಸ್ಟೀಲ್ ಹಾಗೂ ಗ್ಲಾಸ್ ಪೀಸ್ನ್ನು ಹುದುಗಿಸಿ ಇಟ್ಟುಕೊಂಡಿರ್ತಿದ್ಲು. ಪೊಲೀಸರು ಬಂದರೆ ಅರೆಸ್ಟ್ ಮಾಡಬಾರದೆಂದು ಆ ಚಾಕೊಲೇಟನ್ನು ನುಂಗಿ ಬಿಡ್ತಿದ್ಳಂತೆ. ಇದೇ ತಿಂಗಳ ಹತ್ತನೇ ತಾರೀಕು ಬ್ಯಾಟರಾಯನಪುರ ಪೊಲೀಸ್ರು ಆಕೆಯನ್ನು ಬಂಧಿಸಿದ್ರು. ಪೊಲೀಸರು ಅರೆಸ್ಟ್ ಮಾಡೋಕೆ ಮುಂಚೆ ತಾನು ಸಾಯಬೇಕು ಎಂದು ಅದಾಗಲೆ ತಯ್ಯಾರಿ ಮಾಡಿಕೊಂಡಿದ್ದ ಗ್ಲಾಸ್, ಸ್ಟೀಲ್ ಪೀಸ್ ಚಾಕೊಲೇಟನ್ನು ನುಂಗಿದ್ದಳಂತೆ . ಆದರೆ ಆಕೆ ತಾನು ಅಂದುಕೊಂಡಂತೆ ಸಾಯಲಿಲ್ಲ. ಚಾಕೊಲೇಟ್ ನುಂಗಿದ ವಿಚಾರ ಕೂಡ ಪೊಲೀಸರಿಗೆ ಹೇಳಿರಲಿಲ್ಲ. ಹೊಟ್ಟೆಯಲ್ಲಿ ಚಾಕೊಲೇಟ್ ಕರಗುತ್ತಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಈ ಹಿನ್ನಲೆ ತೆಲಂಗಾಣ ಮೂಲದ ಆರೋಪಿತೇ ತಲಹರಿ ಲತಾ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Kshetra Samachara
16/10/2024 02:11 pm