ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಳೆರಾಯನ ಆರ್ಭಟ ಮಳೆ ನೀರಲ್ಲಿ ಪರದಾಡಿದ ಜನರು

ಬೆಂಗಳೂರು : ರಾಜಧಾನಿಯಲ್ಲಿ ಬೆಳಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಜನರು ಕಂಗಾಲಾಗಿದ್ದಾರೆ. ನಗರದಲ್ಲಿ 142 ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

102 ಮನೆಗಳಿಗೆ ನುಗ್ಗಿದ ನೀರನ್ನು ಸದ್ಯ ಬಿಬಿಎಂಪಿ ಹರಸಾಹಸದಿಂದ ಸಾಮಾನ್ಯ ಸ್ಥಿತಿಗೆ ತಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಲ್ಲದೇ 39 ಮರಗಳು ಧರೆಗುರುಳಿದ್ದು, ಈ ಪೈಕಿ 26 ಮರಗಳ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ಜೊತೆಗೆ ನಗರದ 52 ಪ್ರದೇಶಗಳು ಜಲಾವೃತವಾಗಿದ್ದು,ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Shivu K
PublicNext

PublicNext

15/10/2024 08:53 pm

Cinque Terre

24.26 K

Cinque Terre

0