ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯೂರಾದ ಬೆಂಗಳೂರು - ವಲಸೆ ಹೊರಟ ಜನರು

ಬೆಂಗಳೂರು: ಮಳೆಯ ಕಾರಣ ಹೊರಮಾವಿನ ಜನರು ವಲಸೆ ಹೋಗುವ ನಿರ್ಧಾರ ಮಾಡಿದ್ದಾರೆ. ಹೊರಮಾವುವಿನ ಸಾಯ್ ಲೇಔಟ್ ಜನರಿಂದ ವಲಸೆ ಹೋಗುವ ನಿರ್ಣಯ ಮಾಡಿದ್ದು ರಾತ್ರಿ ಸಾಯ್ ಲೇಔಟ್‌ನಲ್ಲಿ ನೀರು ಮನೆಗಳಿಗಳಿಗೆ ನುಗ್ಗಿತ್ತು. ಕೆಳ ಮಹಡಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಸಲ ಮಳೆ ಬಂದಾಗ ಇದೇ ಅವಸ್ಥೆ ಅಂತ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮುಂಗಾರಿನ ಆರಂಭದಲ್ಲಿಯೇ ಹಲವು ಮಂದಿ ಬೇರೆಡೆಗೆ ಶಿಫ್ಟ್ ಆಗಿದ್ರು. ಸ್ವಂತ ಮನೆ ಬಿಟ್ಟು ಅನೇಕರು ಬಾಡಿಗೆ ಮನೆಗಳಿಗೆ ಶಿಫ್ಟ್ ಆಗಿದ್ರು. ಮುಂಗಾರು ಕಡಿಮೆಯಾಗ್ತಿದ್ದಂಗೆ ವಾಪಸ್ ಬಂದ ಜನರಿಗೆ ಈಗ ಹಿಂಗಾರಿನ ಹೊಡೆತ ಶುರು ಆಗಿದೆ. ಇದರಿಂದ ಮತ್ತೆ ಏರಿಯಾ ಖಾಲಿ ಮಾಡ್ತಿರುವ ಚಿತ್ರಣ ಕಾಣಿಸುತ್ತಿದೆ.

Edited By : Suman K
PublicNext

PublicNext

16/10/2024 02:09 pm

Cinque Terre

9.34 K

Cinque Terre

0