ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು ಶ್ರೀರಾಮ ಸೇನೆಯಲ್ಲಿ ಮೂಡಿತಾ ಬಿರುಕು?

ಚಿಕ್ಕಮಗಳೂರು: ಫೈರ್ ಬ್ರಾಂಡ್, ಹಿಂದುತ್ವದ ಹುಲಿ, ಕರೆಸಿಕೊಳ್ಳೋ ಪ್ರಮೋದ್ ಮುತಾಲಿಕ್ ಅವರ ಶ್ರೀರಾಮಸೇನೆಯಲ್ಲಿ ಎಲ್ಲವೂ ಸರಿ ಇದ್ಯಾ ಅನ್ನೋ ಅನುಮಾನ ಕಾಡ್ತಿದೆ. ಯಾಕಂದ್ರೆ, 21ನೇ ವರ್ಷದ ದತ್ತಮಾಲಾ ಅಭಿಯಾನದಲ್ಲಿ ಒಡಕು ಅನಾವರಣಗೊಂಡಿದೆ.

ಜಿಲ್ಲಾಧ್ಯಕ್ಷರಿಗೆ ಗೊತ್ತಿಲ್ಲದಂತೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಮಾಲಾಧಾರಣೆ ದಿನಾಂಕ ಘೋಷಣೆ ಮಾಡಿದ್ದಾರೆ. 15 ವರ್ಷಗಳಿಂದ ಜೀವ ಸವೆಸಿದ್ದೇವೆಂದು ಜಿಲ್ಲಾಧ್ಯಕ್ಷ ರಂಜಿತ್ ದತ್ತಮಾಲಾ ಅಭಿಯಾನಕ್ಕೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಒಂದೇ ಕಾರ್ಯಕ್ರಮಕ್ಕೆ ಇಬ್ಬರೂ ಪ್ರತ್ಯೇಕ ಮನವಿ ಮಾಡಿರೋದು ಹಿಂದುತ್ವದ ಒಡಲಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಒತ್ತಿ ಹೇಳ್ತಿದೆ.

ಶ್ರೀರಾಮಸೇನೆಯ ಹಿರಿಯ - ಕಿರಿಯ ಕಾರ್ಯಕರ್ತರ ನಡುವೆ ಬಿರುಕು ಮೂಡಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಆದರೆ ಎರಡೂ ಗುಂಪು ಕೂಡ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲೇ ದತ್ತಮಾಲಾಧಾರಣೆ ನಡೆಯುತ್ತೆ ಅಂತಿದ್ದಾರೆ. ಹಾಗಾದ್ರೆ, ಮುತಾಲಿಕ್ ಅವರು ಯಾರ ಜೊತೆ ಹೋಗ್ತಾರೆ. ಜಿಲ್ಲಾ ಕಮಿಟಿ ಜೊತೆಯೋ. ರಾಜ್ಯ ಕಮಿಟಿ ಜೊತೆಯೋ. ಹಿರಿಯರು-ಕಿರಿಯರ ಈ ಕೋಲ್ಡ್ ವಾರ್‌ನಿಂದ ಕಾರ್ಯಕರ್ತರು ಕೂಡ ಕನ್ಫ್ಯೂಸ್ ಆಗಿ, ಕಾಫಿನಾಡ ಶ್ರೀರಾಮಸೇನೆ ಇಬ್ಭಾಗವಾಯ್ತಾ ಎಂದು ಅನುಮಾನ ಮೂಡಿದೆ.

ಒಟ್ಟಾರೆ ಶ್ರೀರಾಮ ಸೇನೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ಇದರ ನಡುವೆ ದತ್ತಮಾಲ ಅಭಿಯಾನ ಹೀಗೆ ನಡೆಯಲಿದೆ ಅನ್ನೋದು ಕಾದು ನೋಡಬೇಕಿದೆ.

ಡ್ಯಾನಿ ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Suman K
PublicNext

PublicNext

16/10/2024 02:01 pm

Cinque Terre

16.1 K

Cinque Terre

0

ಸಂಬಂಧಿತ ಸುದ್ದಿ