ಚಿಕ್ಕಮಗಳೂರು: ಬಾರಿಯ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 36 ಜಿಲ್ಲೆಗಳಿಂದ 51 ಸ್ಥಬ್ದಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ಈ ಪೈಕಿ ಚಿಕ್ಕಮಗಳೂರು, ಉಡುಪಿ, ಗದಗ, ಮೈಸೂರು, ಜಿಲ್ಲೆಗೆ ಸಮಾಧಾನಕರ ಬಹುಮಾನ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಕೀರ್ತನಾ ಅವರು ಮಾಹಿತಿ ನೀಡಿದ್ದಾರೆ.
ಈ ಬಾರಿ ಜಿಲ್ಲೆಯಿಂದ ಪೂರ್ಣಚಂದ್ರ ತೇಜಸ್ವಿಯವರ ಸ್ತಬ್ಧ ಚಿತ್ರವನ್ನು ದಸರಾದಲ್ಲಿ ಪ್ರದರ್ಶನ ಮಾಡಲಾಗಿತ್ತು. ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು ಎಂದರು. ಸ್ತಬ್ಧ ಚಿತ್ರವನ್ನು ತಯಾರಿಸಿದ ವಿಶ್ವಕರ್ಮ ಆಚಾರ್ಯ ಅವರು ಮಾತನಾಡಿ, 13 ಲಕ್ಷ ವೆಚ್ಚದಲ್ಲಿ ಸ್ತಬ್ಧ ಚಿತ್ರವನ್ನು ತಯಾರಿ ಮಾಡಲಾಗಿದ್ದು ತೇಜಸ್ವಿ ಅವರ ಅಭಿಮಾನಿಗಳ ಮನ ಗೆದ್ದಿದೆ ಎಂದರು ಕಳೆದ ಬಾರಿ ನಮ್ಮ ಜಿಲ್ಲೆಗೆ ಪ್ರಥಮ ಬಹುಮಾನ ದೊರಕಿತ್ತು ಈ ಬಾರಿ ಸಮಾಧಾನ ಕರ ಬಹುಮಾನ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
18/10/2024 06:12 pm