ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಜಾನಪದ ಕೋಗಿಲೆ ಶ್ರೀ ಕೆ.ಆರ್ ಲಿಂಗಪ್ಪರವರ ಜನ್ಮಸ್ಥಳವಾದ ಕಲ್ಲೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ನ 5ನೇ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮಾತನಾಡಿ ಜಾನಪದ ಕಲೆ ಉಳಿಸಲು ಜಾನಪದ ಸಮ್ಮೇಳನಗಳ ಅಗತ್ಯವಾಗಿವೆ.
ಇಂದಿನ ಯುಗದಲ್ಲಿ ಜಾನಪದ ಕಲೆಗಳ ಮಹತ್ವ ಯುವ ಜನರಿಗೆ ಅಗತ್ಯವಾಗಿ ಅರ್ಥೈಸಬೇಕಿದೆ. ಇಂತಹ ಜಾನಪದ ಸಮ್ಮೇಳನಗಳು ಹೆಚ್ಚು ಹೆಚ್ಚಾಗಿ ಆಯೋಜನೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತರೀಕೆರೆ ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಭಾಗವಹಿಸಿದ್ದರು.
Kshetra Samachara
13/10/2024 08:39 pm