ಸಿದ್ದಾಪುರ : ಹಿರಿಯರ ಸಲಹೆ ಸೂಚನೆ ಮಾರ್ಗದರ್ಶನ ಪಡೆದುಕೊಂಡು ಜೀವನದಲ್ಲಿ ನಾವು ಸಾಗಬೇಕಿದೆ, ಅಪಾರ ಜೀವನ ಅನುಭವ ಹೊಂದಿರುವ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಸಮಾಜ ನಿರ್ಮಾಣ ಕ್ಕೆ ಕೊಡುಗೆ ನೀಡಿದ ನಿಮ್ಮ ಸೇವೆ ಶ್ಲಾಘನೀಯ ಎಂದು ಸಿರ್ಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು .
ಅವರು ಪಟ್ಟಣದ ಬಾಲ ಭವನದಲ್ಲಿ ಸರಕಾರಿ ನಿವೃತ್ತ ನೌಕರರ ಸಂಘದವರು ಆಯೋಜಿಸಿದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ನಿವೃತ್ತ ನೌಕರರ ಸನ್ಮಾನಿಸಿ ಮಾತನಾಡಿದರು.
ತಮ್ಮ ಅನುಭವದ ಹಿತ ನುಡಿಗಳು ಸಮಾಜಕ್ಕೆ ತಮ್ಮ ಅವಶ್ಯಕತೆ ಇನ್ನೂ ಹೆಚ್ಚಿನದಿದೆ,ನಾವು ನೀವು ಎಲ್ಲರೂ ಒಟ್ಟಾಗಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಶ್ರಮಿಸೋಣ ಎಂದರು.
ವೇದಿಕೆಯಲ್ಲಿ ತಹಸೀಲ್ದಾರ್ ಎಂ ಆರ್ ಕುಲ್ಕರ್ಣಿ, ಇ ಒ ದೇವರಾಜ್ ಹಿತ್ಲಕೊಪ್ಪ,ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ ವಿ ಹೆಗಡೆ, ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ,ಲಯನ್ಸ್ ಕ್ಲಬ್ ಅಧ್ಯಕ್ಷ ಎ ಜಿ ನಾಯ್ಕ್ ನಿವೃತ್ತ ನೌಕರರ ಸಂಘದ ಸಿದ್ದಾಪುರ ತಾಲೂಕ ಅಧ್ಯಕ್ಷ ಸಿ ಎಸ್ ಗೌಡರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
15/10/2024 03:43 pm