ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಡ್ ರೇಜ್ ಪ್ರಕರಣ ಕೊನೆ ಯಾವಾಗ?

ತೂಬರಹಳ್ಳಿ (ಮಹದೇವಪುರ) : ಸಿಲಿಕಾನ್ ಸಿಟಿಯಲ್ಲಿ ಹಗಲು - ರಾತ್ರಿ ಎನ್ನದೇ ರೋಡ್ ಅಲ್ಲಿ ರೌಡಿಸಂ ಮಾಡ್ತಾ ಇರೋ ಘಟನೆ ಹೆಚ್ಚುತ್ತಾ ಇದೆ. ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ತೂಬರಹಳ್ಳಿಯಲ್ಲಿ ರಾತ್ರಿ 10.30 ರ ಸುಮಾರಿಗೆ ದಿಢೀರ್ ಅಂತ ಕಾರ್ ಮುಂದೆ ಬಂದು ವಾಹನ ಸವಾರನೋರ್ವ ಉದ್ದೇಶ ಪೂರ್ವಕವಾಗಿ ಕ್ಯಾತೆ ತೆಗೆದ ಘಟನೆ ನಡೆದಿದೆ. ತಾನೇ ಕಾರಿಗೆ ಅಡ್ಡ ಬಂದು ಕಾರು ಚಾಲಕನ ಬಳಿ ವಾಹನ ಸವಾರನೋರ್ವ ಕಿರಿಕ್ ಮಾಡಿದ್ದಾನೆ.

ದ್ವಿಮುಖ ಸಂಚಾರ ರೋಡ್ ಅಲ್ಲಿ ಏಕಾಏಕಿಯಾಗಿ ಟೂ ವೀಲರ್ ಸವಾರ ನುಗ್ಗಿ ಬರುತ್ತ ಇದ್ದಂತೆಯೇ, ಈತನ ಹಿಂದೆಯೇ ಇನ್ನೊಂದಿಬ್ರು ಗಾಡಿಯಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಕಾರಿಗೆ ಜಾಗ ಬಿಡದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಕಾರು ಬ್ಯಾಕ್ ಸೈಡ್ ಹೋಗ್ತಾ ಇದ್ದ ಹಾಗೇ ಉಳಿದ ವೆಹಿಕಲ್ ಬರ್ತಿದ್ದಂಗೆ, ಪುಂಡರು ಯೂಟರ್ನ್ ಹೊಡೆದು ಜೂಟ್ ಆಗಿದ್ದಾರೆ.

Edited By : Suman K
PublicNext

PublicNext

14/10/2024 06:13 pm

Cinque Terre

20.24 K

Cinque Terre

0

ಸಂಬಂಧಿತ ಸುದ್ದಿ