ಚಿಕ್ಕಮಗಳೂರು : ಸಿ.ಟಿ ರವಿ ಮೇಲಿನ ಕೇಸ್ಗಳನ್ನ ಹಿಂಪಡೆದಿದ್ದೀವಿ ಎಂಬ ಹೆಚ್.ಕೆ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬಾಗೇಪಲ್ಲಿಯಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿರಲಿಲ್ಲ. ನನ್ನ ಮೇಲಿನ ಕೇಸ್ ಹಿಂಪಡೆಯಿರಿ ಎಂದು ಅರ್ಜಿಯನ್ನೂ ಕೊಟ್ಟಿಲ್ಲ. ಕಳೆದ ಎಂಪಿ ಎಲೆಕ್ಷನ್ ವೇಳೆ ನನ್ನ ಟ್ವೀಟ್ ಅಧಾರದ ಮೇಲೆ 4 ಕೇಸ್ ಹಾಕಿದ್ದಾರೆ. ನನ್ನ ಮೇಲಿನ ಕೇಸ್ಗಳನ್ನ ಹೈಕೋರ್ಟ್ನಲ್ಲಿ ಸ್ಟೇ ಮಾಡಿಸಿದ್ದೀನಿ ಎಂದಿದ್ದಾರೆ.
ಅಲ್ಲದೇ ಎರಡೂವರೆ ವರ್ಷದ ಹಿಂದೆ ಚಿಕ್ಕಬಳ್ಳಾಪುರ, ಕೋಲಾರದ ರೈತರ ಮೇಲಿನ ಕೇಸ್ ಹಿಂಪಡೆಯುವಂತೆ ಪತ್ರ ಕೊಟ್ಟಿದ್ದೆ. ಆ ಫೈಲ್ ಪುಟಪ್ ಆಗಿ ಈಗ ಬಂದಿರಬೇಕು. ರಾಷ್ಟ್ರಘಾತುಕ ಶಕ್ತಿಗಳ ಜೊತೆ ನನ್ನ ಹೆಸರು ತೋರಿಸೋದು ಬೇಡ. ನಿಮ್ಮ ಉದಾರತೆಯಿಂದ ಕೇಸ್ ಹಿಂಪಡೆಯೋ ಅಗತ್ಯವೂ ನನಗಿಲ್ಲ. ನೀವು ರೈತರು, ಕನ್ನಡ ಹೋರಾಟಗಾರ ಕೇಸ್ ಹಿಂಪಡೆದಿಲ್ಲ. ನೀವು ಹಿಂಪಡೆದಿರೋದು ಕ್ರಿಮಿನಲ್ ಅಂಡ್ ಕಮ್ಯುನಲ್ಗಳ ಕೇಸ್ಗಳನ್ನು. ಹೆಚ್.ಕೆ.ಪಾಟೀಲರಂತ ಸಿನಿಯರ್ ಮಿನಿಸ್ಟರ್ ಬಳಿ ಇಂತಹ ಸುಳ್ಳನ್ನು ನಿರೀಕ್ಷಿಸಿರಲಿಲ್ಲ ಎಂದು ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
12/10/2024 09:12 pm