ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ಬಾಗಿನ ಕೊಡುತ್ತಿರುವುದನ್ನು ರಾಜಕೀಯ ದೃಷ್ಟಿಯಿಂದ ಬಿಂಬಿಸುತ್ತಿದ್ದಾರೆ - ಶಾಸಕಿ ನಯನ ಮೋಟಮ್ಮ

ಮೂಡಿಗೆರೆ: ವಿಜಯದಶಮಿಯ 9 ದಿನದ ಶ್ರೀ ದುರ್ಗಾ ದೇವಿಯ ಪೂಜೆಯ ಫಲ ಎಲ್ಲರಿಗೂ ದೊರಕುವಂತಾಗಿಲಿ ಎಂದು ಮೂಡಿಗೆರೆ ಶ್ರೀ ದುರ್ಗಾ ಸೇವಾ ಸಮಿತಿ ಗೌರವಾಧ್ಯಕ್ಷೆ ಹಾಗೂ ಶಾಸಕಿ ನಯನಾ ಮೋಟಮ್ಮ ಹೇಳಿದರು.

ವಿಜಯ ದಶಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಬಾಗಿನ ಕೊಟ್ಟು ಮಾತನಾಡಿದರು.ಅವರು ಕಳೆದ 21 ವರ್ಷದಿಂದ ಶ್ರೀ ದುರ್ಗಾದೇವಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದು, ಯಾವುದೇ ರಾಜಕೀಯ ಪ್ರೇರಿತವಿಲ್ಲದೇ ಪ್ರತಿ ವರ್ಷ ತನ್ನ ತಾಯಿ ಮೋಟಮ್ಮ ಅವರು ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯವನ್ನು ತಾನು ಮುಂದುವರೆಸುತ್ತಿದ್ದೇನೆಂದು ಹೇಳಿದರು. ಬಾಗೀನ ಕೊಡುವ ಮಹತ್ವವಾದ ಕಾರ್ಯವನ್ನು ಕೆಲವರು ರಾಜಕೀಯ ದೃಷ್ಟಿಯಿಂದ ಬಿಂಬಿಸುತ್ತಿದ್ದಾರೆ. ಅದಕ್ಕೆ ಕಿವಿಕೊಡಬಾರದು. ಸೀರೆ ಕೊಡುವುದಕ್ಕೂ, ಬಾಗಿನ ಕೊಡುವುದಕ್ಕೂ ಅರ್ಥ ಬೇರೆ ಇದೆ ಎಂದರು.

Edited By : Nagaraj Tulugeri
Kshetra Samachara

Kshetra Samachara

12/10/2024 08:13 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ