ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಂಕಷ್ಟದಲ್ಲಿದ್ದವರಿಗೆ ನೆರವಾದ ಶಾಸಕಿ ನಯನ ಮೋಟಮ್ಮ

ಚಿಕ್ಕಮಗಳೂರು: 2019ರ ಆಗಸ್ಟ್ 9ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ಜನರು ಸುರಿದ ಮಳೆಗೆ ಇಡೀ ಊರಿಗೆ ಊರೇ ನೀರಲ್ಲಿ ಕೊಚ್ಚಿ ಹೋಗಿತ್ತು. ಗ್ರಾಮದ 18 ಮನೆಗಳು ಸಂಪೂರ್ಣ ನಾಶವಾಗುವ ಜೊತೆಗೆ, ಅಪಾರ ಪ್ರಮಾಣದ ಬೆಳೆ, ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿತ್ತು.

ನಮಗೆ ಸೂಕ್ತ ಪುನರ್ವಸತಿ ನೀಡುವಂತೆ ಬಿಜೆಪಿ ಶಾಸಕ ಕುಮಾರಸ್ವಾಮಿ ಅವರಿಗೆ ಮನವಿ ನೀಡಿ ಅಲೆದು ಅಲೆದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ. ಮೂಡಿಗೆರೆಗೆ ಶಾಸಕಿಯಾಗಿ ಆಯ್ಕೆಯಾಗಿದ್ದ ನಯನ ಮೋಟಮ್ಮ ಅವರಿಗೆ ಒಂದು ಬಾರಿ ಮಾತ್ರ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ನಂತರ ಗ್ರಾಮಸ್ಥರು ಕೈ ಚೆಲ್ಲಿ ಕುಳಿತ್ತಿದ್ದರು. ಗ್ರಾಮಸ್ಥರ ಸಮಸ್ಯೆಯನ್ನು ಅರಿತ ಶಾಸಕಿ ನಯನ ಮೋಟಮ್ಮ ಇದೀಗ ಸಮಸ್ಯೆಗೆ ಸ್ಪಂದಿಸಿ ಎಲ್ಲಾ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

12/10/2024 05:32 pm

Cinque Terre

41.02 K

Cinque Terre

0

ಸಂಬಂಧಿತ ಸುದ್ದಿ