ಮುಲ್ಕಿ:ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆ ಹಾಗೂ ಸಿಡಿಲಿಗೆ ಅಪಾರ ಹಾನಿ ಸಂಭವಿಸಿದೆ. ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಎಸ್. ರಾವ್ ನಗರ ಬಿಲ್ಲವ ಸಂಘದ ಬಳಿಯ ಅಕ್ಬರ್ ಎಂಬುವರ ಮನೆಗೆ ಸಿಡಿಲು ಬಡಿದು ಮನೆಯ ಟೆರೇಸ್ ನ ಸಿಮೆಂಟ್ ಬಿರುಕು ಬಿಟ್ಟು ತುಂಡಾಗಿ ಬಿದ್ದಿದೆ.
ಮನೆಯ ಒಳಗಿನ ಇನ್ವರ್ಟರ್, ವಿದ್ಯುತ್ ಮೀಟರ್, ಬಲ್ಬ್ ಫ್ಯಾನ್ ಗಳಿಗೆ, ಸಿಡಿಲು ಬಡಿದು ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಸಿಡಿಲು ಬಡಿತ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಬರ್ ರವರ ನೆರೆಮನೆಯ ಸರೋಜಿನಿ ಎಂಬುವರ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಮುಲ್ಕಿ ಪರಿಸರದ ಕಿನ್ನಿಗೋಳಿ, ಹಳೆಯಂಗಡಿ, ಪಕ್ಷಿಕೆರೆ ಪರಿಸರದಲ್ಲಿ ಸಿಡಿಲಿಗೆ ಅಪಾರ ಹಾನಿಯಾದ ಬಗ್ಗೆ ಮಾಹಿತಿ ಬಂದಿದೆ
PublicNext
08/10/2024 09:15 pm