ಹುಬ್ಬಳ್ಳಿ : ಶಾಸಕ ಪ್ರಸಾದ ಅಬ್ಬಯ್ಯಗೆ ಒಂದಿಷ್ಟು ಸೌಜನ್ಯತೆ ಇಲ್ಲದೇ ಹಿರಿಯ ನಾಗರಿಕರು, ಹೋರಾಟಗಾರರಾದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ನಾಲಿಗೆ ಹರಿ ಬಿಟ್ಟಿರುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚನೆ ಮಾಡಬೇಕು ಇಲ್ಲವಾದರೇ ಬಹುದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮಸೇನಾ ಮುಖಂಡ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಇಂದಿರಾ ಕ್ಯಾಂಟಿನ್ ವಿರೋಧಿಗಳಲ್ಲ. ಸ್ಮಶಾನದ ಒತ್ತುವರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದರೆ ಶಾಸಕ ಪ್ರಸಾದ ಅಬ್ಬಯ್ಯ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ಹಿರಿಯರಿಗೆ ಗೌರವ ಕೊಡುವ ಸೌಜನ್ಯತೆ ಇಲ್ಲದೇ ಇರುವವರು ಜನಪ್ರತಿನಿಧಿಗಳಾಗಿ ಇರಲು ಯೋಗ್ಯರಲ್ಲ ಎಂದರು.
ಜನಪ್ರತಿನಿಧಿಯಾದವರು ಜನರಿಗೆ ಗೌರವ ಕೊಡುವುದನ್ನು ಕಲಿತಕೊಳ್ಳಬೇಕು. ಸುದ್ಧಿಗೋಷ್ಟಿ ನಡೆಸಿ ಧಮ್, ತಾಕತ್ತು ಬಗ್ಗೆ ಮಾತನಾಡುವುದು ಸರಿಯಲ್ಲ ಕೂಡಲೇ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2024 02:05 pm