ಪೆರ್ಡೂರು : ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಅದರಲ್ಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳು ಹೆಚ್ಚು ಆತಂಕದಲ್ಲಿವೆ. ನಾಯಿಗಳ ಬೇಟೆಯಾಡುವ ಚಿರತೆ ಹೆಚ್ಚಾಗಿ ನಿವಾಸಗಳಲ್ಲಿರುವ ಸಾಕುಪ್ರಾಣಿಗಳನ್ನೇ ಟಾರ್ಗೆಟ್ ಮಾಡುತ್ತವೆ. ಉಡುಪಿಯ ಪೆರ್ಡೂರು ಸಮೀಪ ಚಿರತೆ ದಾಳಿ ನಡೆದಿದೆ. ಪೆರ್ಡೂರುವಿನ ಗೋರೇಲಿ ಎಂಬಲ್ಲಿ ಹರಿನಾರಾಯಣ ಭಂಡಿ ಯವರ ನಿವಾಸದಲ್ಲಿ ಚಿರತೆಯ ಹಾವಳಿಗೆ ಸಾಕು ನಾಯಿ ಬಲಿಯಾಗಿದೆ. ಇದರಿಂದ ಈ ಭಾಗದ ಮನೆಗಳಲ್ಲಿ ಚಿರತೆಯ ಭೀತಿ ಹೆಚ್ಚಿದೆ.ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಊರವರು ಒತ್ತಾಯಿಸಿದ್ದಾರೆ.
PublicNext
18/09/2024 02:17 pm