ಬೆಂಗಳೂರು: ದಿವಂಗತ ರೆಬೆಲ್ ಸ್ಟಾರ್ ಡಾ.ಅಂಬರೀಶ್ ಅವರು ಎಂದೆಂದಿಗೂ ಅಜರಾಮರ. ಅವರು ಇಂದಿಗೂ ಎಲ್ಲರ ಮನದಲ್ಲಿ ಜೀವಂತವಾಗಿದ್ದಾರೆ. ಅವರ ನೆನಪಿಗಾಗಿ ಶ್ರೀನಗರ ಬಸ್ ನಿಲ್ದಾಣದಲ್ಲಿ ಅಭಿಮಾನಿಗಳು ನಿರ್ಮಿಸಿದ್ದ ಕಂಚಿನ ಪುತ್ಥಳಿಯನ್ನು ಇಂದು ಅನಾವರಣಗೊಳಿಸಲಾಯಿತು.
1990ರಲ್ಲಿ ಸ್ವತಃ ಅಂಬರೀಶ್ ಅವರೇ ಕನ್ನಡ ರಾಜ್ಯೋತ್ಸವ ಧ್ವಜ ಕಂಬವನ್ನು ಉದ್ಘಾಟನೆ ಮಾಡಿದ್ದರು. ಅದೇ ಸ್ಥಳದಲ್ಲಿ ಈಗ ಅವರ ಕಂಚಿನ ಪುತ್ಥಳಿ ಅನಾವರಣಗೊಂಡಿದೆ. ಈ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಟ ಶ್ರೀನಗರ ಕಿಟ್ಟಿ, ತಬಲಾ ನಾಣಿ, ಜಿಮ್ ರವಿ ಹಾಗೂ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಭಾಗಿಯಾಗಿದ್ದರು. ಇನ್ನು ಅಂಬರೀಶ್ ಅವರ ಕಂಚಿನ ಪುತ್ಥಳಿಯನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ನಿರ್ಮಲಾನಂದನಾಥ್ ಅವರು ಅನಾವರಣಗೊಳಿಸಿದರು. ಬಳಿಕ ಅಂಬರೀಶ್ ಅವರನ್ನು ಹಾಗೂ ಅವರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
PublicNext
17/09/2024 10:28 pm