ಬೆಂಗಳೂರು: ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹಿಳಾ ಕಲಾವಿದರ ರಕ್ಷಣೆ ಕುರಿತು ಸಭೆ ನಡೆಸಲಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ಈ ಸಭೆ ನಡೆದಿದ್ದು ನೀತು, ಅಶ್ವಿನಿ, ತಾರಾ, ಭಾವನಾ ಇನ್ನು ಮುಂತಾದ ಕಲಾವಿದರು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ನೀತು, ಇಲ್ಲಿಯವರೆಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿರಲಿಲ್ಲ. ಆದರೆ, ಈಗ ಸಮಯ ಬಂದಿದೆ. ಶೂಟಿಂಗ್ ವೇಳೆ ಕೆಟ್ಟದಾಗಿ ಟಚ್ ಮಾಡ್ತಿದ್ರು, ಮಾತಾಡ್ತಿದ್ರು. ಮಹಿಳಾ ಕಲಾವಿದರಿಗೆ ರಕ್ಷಣೆ ಬೇಕೇ ಬೇಕು ಎಂದು ಹೇಳಿದರು.
PublicNext
16/09/2024 10:41 pm