ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗವಿಸಿದ್ದೇಶ್ವರ ಶ್ರೀ ಕಲ್ಯಾಣಪುರ ಮಠಕ್ಕೆ ಭೇಟಿ, ಉಭಯ ಶ್ರೀಗಳ ಸಮಾಗಮ

ಕುಂದಗೋಳ : ತಮ್ಮ ಪ್ರವಚನದ ಮೂಲಕವೇ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದ ಕೊಪ್ಪಳ ಜಿಲ್ಲೆಯ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮತ್ತು ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ಸಮಾಗಮ ಕುಂದಗೋಳದಲ್ಲಿ ಏರ್ಪಟ್ಟಿದೆ.

ಹೌದು ! ಕುಂದಗೋಳ ತಾಲೂಕಿಗೆ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಕುಂದಗೋಳ ಪಟ್ಟಣದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ಕೋರಿಕೆ ಮೇರೆಗೆ ಕಲ್ಯಾಣಪುರ ಮಠಕ್ಕೆ ಭೇಟಿ ಕೊಟ್ಟರು.

ಈ ವೇಳೆ ಅಭಿನವ ಗವಿಸಿದ್ದೇಶ್ವರ ಶ್ರೀಗಳನ್ನು ಪುಷ್ಪ ಸಮರ್ಪಣೆ ಮಾಡುವ ಮೂಲಕ ಆಮಂತ್ರಿಸಿದ ಕಲ್ಯಾಣಪುರ ಶ್ರೀಗಳ ಶಿಷ್ಯ ಬಳಗ ಪಾದಪೂಜೆ ಕೈಗೊಂಡು ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದರು. ಕುಂದಗೋಳ ಪಟ್ಟಣ ಸೇರಿದಂತೆ ಸುತ್ತಲಿನ ಭಕ್ತರು ಶ್ರೀಮಠಕ್ಕೆ ಆಗಮಿಸಿದ್ದರು.

Edited By : Vinayak Patil
Kshetra Samachara

Kshetra Samachara

17/09/2024 02:58 pm

Cinque Terre

10.29 K

Cinque Terre

0

ಸಂಬಂಧಿತ ಸುದ್ದಿ