ಬೆಂಗಳೂರು: ಬನಶಂಕರಿಯ ಕಾವೇರಿ ನಗರದಲ್ಲಿ ಇಂದು ಮಧ್ಯಾಹ್ನ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರೋ ಘಟನೆ ನಡೆದಿದೆ. ವಿಕ್ರಂ( 21 ) ಕೊಲೆಯಾದ ಯುವಕ. ವಿಕ್ರಂನನ್ನು ಬನಶಂಕರಿ ಠಾಣೆ ರೌಡಿ ಶೀಟರ್ ಆಗಿರೋ ವಾಸೀಂ (28) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೆಲ ದಿನಗಳ ಹಿಂದೆ ವಾಸೀಂಗೆ ವಿಕ್ರಂ ಹಲ್ಲೆ ಮಾಡಿದ್ದ. ಈ ದ್ವೇಷದಿಂದ ವಾಸೀಂ ಕೊಲೆ ಮಾಡಿರೋದಾಗಿ ತಿಳಿದುಬಂದಿದೆ.
ಇಂದು ಕಾವೇರಿ ನಗರದ 8ನೇ ಕ್ರಾಸ್ ನಲ್ಲಿ ಸ್ನೇಹಿತನ ಜೊತೆ ನಿಂತಿದ್ದ ವಿಕ್ರಂನ ಎದೆಗೆ ಇರಿದು ವಾಸೀಂ ಎಸ್ಕೇಪ್ ಆಗಿದ್ದ.
ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ವಿಕ್ರಂ ಪ್ರಾಣ ಬಿಟ್ಟಿದ್ದಾನೆ. ಘಟನೆ ನಡೆದು ಕೆಲ ಗಂಟೆಯಲ್ಲಿಯೇ ಬನಶಂಕರಿ ಪೊಲೀಸ್ರು ವಾಸೀಂನನ್ನು ಬಂಧಿಸಿದ್ದಾರೆ.
PublicNext
16/09/2024 10:41 pm