ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಣ್ಣಿನ ಜ್ಯೂಸ್ ಶಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ಈ ಖತರ್ ನಾಕ್ ಹುಡುಗರು ಹಣ್ಣಿನ ಜ್ಯೂಸ್ ಗೆ ಯೂರಿನ್ ಮಿಕ್ಸ್ ಮಾಡಿ ಗ್ರಾಹಕರಿಗೆ ಕುಡಿಸುತ್ತಿದ್ದರು.ಈ ಸುದ್ದಿ ಕೇಳಿ ಅಲ್ಲಿ ಜ್ಯೂಸ್ ಕುಡಿದವರಿಗೆಲ್ಲಾ ಅಸಹ್ಯ ಉಂಟು ಮಾಡಿದೆ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ವಟಗುಟ್ಟುವಂತೆ ಮಾಡಿದೆ.ಈ ವೇಳೆ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದ್ದು ಒಂದು ಲೀಟರ್ ಮೂತ್ರ ಪತ್ತೆಯಾಗಿದೆ. ಜ್ಯೂಸ್ನಲ್ಲಿ ಸೂಸು ಬೆರೆಸಿದ್ದನ್ನು ಸ್ವತಃ ಅಂಗಡಿಯವರು ಒಪ್ಪಿಕೊಂಡು, ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರಂತೆ.ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
PublicNext
16/09/2024 08:13 pm