ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ರಿಗೆ ಮಾಹಿತಿ ನೀಡಿದ ವ್ಯಕ್ತಿ ಮೇಲೆ ಲಾಂಗ್ ಬೀಸಿದ ರೌಡಿ ಶೀಟರ್ ಪವನ್..!

ಬೆಂಗಳೂರು: ವ್ಯಕ್ತಿಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ರೌಡಿ ಶೀಟರ್ ನ ಮತ್ತೊಂದು ಕರಾಳಮುಖ ಬಯಲಾಗಿದೆ. ಪವನ @ ಕಡಬು ಮೇಲೆ ವಾರೆಂಟ್ ಜಾರಿ ಪೊಲೀಸ್ರು ಹುಡುಕಾಟ ನಡೆಸ್ತಿದ್ರು. ಈ ವೇಳೆ ಭಾತ್ಮೀಧಾರರೊಬ್ರು ಮಾಹಿತಿ ನೀಡಿದ್ದನ್ನ ಪೊಲೀಸ್ರೇ ಪವನನಿಗೆ ಮಾಹಿತೀ ನೀಡಿರೋ ಅನುಮಾನ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಸುಂಕದಕಟ್ಟೆ ಬಳಿ ಇದೇ ಪವನ ಲಾಂಗ್ ಬೀಸಿ ಭಾತ್ಮಿಧಾರನ ಮೇಲೆ ಹಲ್ಲೆ ನಡೆಸಿದ್ದಾನೆ‌. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಆದ್ರೆ ಭಾತ್ಮಿಧಾರನ ಬಗ್ಗೆ ರೌಡಿ ಶೀಟರ್ ಗೆ ಮಾಹಿತಿ ನೀಡಿದ ಪೊಲೀಸ್ರ ಮೇಲು ಕ್ರಮ ಆಗಬೇಕಿದೆ. ಪೊಲೀಸ್ರನ್ನ ನಂಬಿ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ರೌಡಿ ಪವನನ ಆಪ್ತ ಎಂದು ಹೇಳಲಾಗ್ತಿದೆ.

ಇನ್ನು ವ್ಯಕ್ತಿಗೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು ಗಾಂಜಾ ಸೇದಬೇಡ ಅಂದಿದ್ದಕ್ಕಂತೆ. ಹಲ್ಲೆಗೊಳಗಾದ ವ್ಯಕ್ತಿ ಈ ಹಿಂದೆ ಪವನ್ ಗಾಂಜಾ ಸೇದೋವಾಗ ಒಂದೆರಡೇಟು ಹೊಡೆದು ಗಾಂಜಾ ಸೇದಬೇಡ ಅಂತ ಬುದ್ಧಿ ಹೇಳಿದ್ನಂತೆ.‌ ಇದೇ ಜಿದ್ದಿನ ಮೇಲೆ ಹುಡುಗರ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿರೋದಾಗಿ ತಿಳಿದು ಬಂದಿದೆ.‌

Edited By : Vinayak Patil
PublicNext

PublicNext

16/09/2024 03:48 pm

Cinque Terre

22.62 K

Cinque Terre

3

ಸಂಬಂಧಿತ ಸುದ್ದಿ