ಬೆಂಗಳೂರು: ನಡುರಸ್ತೆಯಲ್ಲಿ ಯುವಕನ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ರೌಡಿ ಪಟಾಲಂ, ಯುವಕನ ಬಟ್ಟೆ ಬಿಚ್ಚಿಸಿ ನಗ್ನವಾಗಿ ರಸ್ತೆಯಲ್ಲಿ ಓಡುವಂತೆ ಮಾಡಿದ್ರು ಇಲ್ಲಿ ಕೇಳೋರಿಲ್ಲ, ಪ್ರಾಣ ಉಳಿಸಿಕೊಳ್ಳಲು ಯುವಕ ನಡುರಸ್ತೆಯಲ್ಲಿ ಬೆತ್ತಲೆಯಾಗಿ ಓಡಿರೋ ಘಟನೆ ನಗರದಲ್ಲಿ ನಡೆದಿದೆ.
ಕಮಿಷನರ್ ದಯಾನಂದ್ ಸಾಹೇಬ್ರೆ ಈ ವಿಡಿಯೋ ನೋಡಿ.. ಈ ಘಟನೆ ನಡೆದು 15 ದಿನ ಆಗಿದ್ಯಂತೆ, ನಾಗರಿಕ ಸಮಾಜದಲ್ಲಿ ಈ ರೀತಿ ಕ್ರೌರ್ಯ ನಡೆದ್ರೆ ಜನ ನೆಮ್ಮದಿಯಾಗಿ ನಿದ್ದೆ ಮಾಡೋದು ಹೇಗೆ..? ನಡು ರಸ್ತೆಯಲ್ಲಿ ಯುವಕನಿಗೆ ಬೆತ್ತಲು ಮಾಡಿ ಹಲ್ಲೆ ನಡೆಸಿದ್ರು ಇಲ್ಲಿ ಕೇಳೋರಿಲ್ವಾ ಎಂಬಂತ ಪ್ರಶ್ನೆ ಕಾಡುತಿದೆ..
ಹೌದು..ರೌಡಿ ಶೀಟರ್ ಪವನ್ @ ಕಡುಬು ಎಂಬಾತ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ..ಮುಖ ಮೂತಿಯಲ್ಲಿ ರಕ್ತ ಬರುವಂತೆ ಬಟ್ಟೆ ಬಿಚ್ಚಿಸಿದ ರೌಡಿಶೀಟರ್ ಪಟಾಲಂ ಹಲ್ಲೆ ನಡೆಸಿದ್ದಾರೆ..
ರಾಜಗೋಪಲನಗರ ರೌಡಿ ಶೀಟರ್ ಪವನ@ ಕಡುಬು, ಮತ್ತು ಆತನ ರೌಡಿ ಪಟಾಲಂ ಹಲ್ಲೆ ನಡೆಸಿ ಬಟ್ಟೆ ಬಿಚ್ಚಿಸಿರುವ ವಿಡಿಯೋವನ್ನ ಮೊಬೈನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರಂತೆ..ಇನ್ನು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಆದೀಶ್ವರ ಕಾಂಪ್ಲೆಕ್ಸ್ ಬಳಿ ಯುವಕನ ಮೇಲೆ ಹಲ್ಲೆ ನಡೆಸಿರೋದಾಗಿ ತಿಳಿದುಬಂದಿದೆ.
PublicNext
16/09/2024 10:00 am