ಮುಲ್ಕಿ: ಕಿನ್ನಿಗೋಳಿ ಸಮೀಪದ ನಿಡ್ಡೋಡಿ ನೀರುಡೆ ಎಂಬಲ್ಲಿ ರಾತ್ರಿ ಹೊತ್ತು ಮನೆ ಎದುರು ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಬೇಟೆಯಾಡಿದೆ. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯೆ ನೀರುಡೆ ಬೋಂಬೆಹಿತ್ಲ್ ಮನೆ ಲವೀನಾ ಡಿಸೋಜಾ ಎಂಬುವರ ಮನೆ ಎದುರು ಭಾಗದಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ರಾತ್ರಿ ಚಿರತೆ ಬೇಟೆಯಾಡಿದೆ.
ಚಿರತೆ ನಾಯಿಯನ್ನು ಹಿಡಿಯುವ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸ್ಥಳೀಯ ನಾಗರಿಕರನ್ನು ಭಯಭೀತರನ್ನಾಗಿಸಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ನಿಡ್ಡೋಡಿ ನೀರುಡೆ ಪರಿಸರದಲ್ಲಿ ಗಣಿ ಉದ್ಯಮಿಗಳಿಂದ ಅಕ್ರಮ ಗಣಿಗಾರಿಕೆ ನಡೆಸಿ ಕಾಡು ನಾಶವಾಗುತ್ತಿದ್ದು ವನ್ಯಜೀವಿಗಳು ಆಹಾರ ಹುಡುಕುತ್ತ ಕಾಡಿನಿಂದ ವಸತಿಪ್ರದೇಶಕ್ಕೆ ಲಗ್ಗೆ ಇಡುತ್ತಿದ್ದು ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
14/09/2024 02:28 pm