ಮಂಗಳೂರು:ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಮುಲ್ಕಿ ಹೆಜಮಾಡಿ ಟೋಲ್ಗೇಟ್ ನಿಂದ ಸುಳ್ಯ ಸಂಪಾಜೆ ಗೇಟ್ವರೆಗೆ ನಡೆಯುವ ಮಾನವ ಸರಪಳಿಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾಡಳಿತವು ಕೆಲವು ಸೂಚನೆಗಳನ್ನು ನೀಡಿದೆ.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿ.ಮೀ. ವರೆಗೆ ಸಾಗಲಿರುವ ಈ ಮಾನವ ಸರಪಳಿ ಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವ ಹಿಸಲಿದ್ದಾರೆ. ಮುಲ್ಕಿ-ಸುರತ್ಕಲ್-ಬೈಕಂಪಾಡಿ- ನಂತೂರು-ಪಡೀಲ್-ಬಿ.ಸಿ.ರೋಡ್-ಪುತ್ತೂರು-
ಸುಳ್ಯ ಮಾರ್ಗದಲ್ಲಿ ಮಾನವ ಸರಪಳಿ ಸಾಗಲಿದೆ.
ರವಿವಾರ ಬೆಳಗ್ಗೆ 9:30ರಿಂದ 9:37ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲಬೇಕು. 9:37ರಿಂದ 9:40ರವರೆಗೆ ನಾಡಗೀತೆ, 9:41ರಿಂದ 9:55ರವರೆಗೆ ಅತಿಥಿಗಳಿಂದ ಭಾಷಣ, 9:55ರಿಂದ 9:57ರವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು, 9:57ರಿಂದ 9:59ರವರೆಗೆ ಮಾನವ ಸರಪಳಿ ಯಲ್ಲಿ ಕೈ ಕೈ ಹಿಡಿದು ನಿಲ್ಲುವುದು. ಬೆಳಗ್ಗೆ 10ಕ್ಕೆ ಮಾನವ ಸರಪಳಿಯಲ್ಲೇ ತಮ್ಮ ಎರಡು ಕೈಗಳನ್ನು ಮೇಲೆತ್ತಿ 'ಜೈ ಹಿಂದ್, ಜೈ ಕರ್ನಾಟಕ' ಘೋಷಣೆ ಕೂಗಿ ಸರಪಳಿ ಯನ್ನು ಕಳಚಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Kshetra Samachara
14/09/2024 01:42 pm