ಮುಲ್ಕಿ: ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತಿದ್ದ ಚಿರತೆ ಮುಲ್ಕಿ ನಗರದಲ್ಲಿ ಮಂಗಳವಾರ ಸ್ಥಳೀಯರಿಗೆ ಕಾಣಸಿಕ್ಕಿದ್ದು ಭಯಭೀತರಾಗಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮುಲ್ಕಿ ಹಳೆ ಪೊಲೀಸ್ ಠಾಣೆಯ ಬಳಿ ಕಾಣಿಸಿಕೊಂಡ ಚಿರತೆ ರಾಷ್ಟ್ರೀಯ ಹೆದ್ದಾರಿಯ ಕ್ಷೀರಸಾಗರ ಹಾಲಿನ ಸೊಸೈಟಿ ಬಳಿ ಕಾಣಸಿಕ್ಕಿದ್ದು ಬಳಿಕ ಅಲ್ಲಿಂದ ಹೆದ್ದಾರಿ ಮುಖಾಂತರ ಹೋಗಿ ಚಿತ್ರಾಪು ಮರದ ಮಿಲ್ ಬಳಿ ಕೆಲವರಿಗೆ ಕಾಣಿಸಿದ್ದು ಸ್ಥಳೀಯರು ಆತಂಕ ಪಡುವಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಶಿಮಂತೂರು ನಡಿಗುತ್ತು ಬಳಿ ಚಿರತೆ ಮತ್ತು ಎರಡು ಮರಿಗಳು ಕಾಣಸಿಕ್ಕಿದ್ದು ಬಳಿಕ ಮಾಯವಾಗಿತ್ತು
ಇದೀಗ ಗ್ರಾಮೀಣ ಪ್ರದೇಶದಿಂದ ಚಿರತೆ ನಗರ ಪ್ರದೇಶಕ್ಕೆ ವಲಸೆ ಬಂದಿದ್ದು ನಗರವಾಸಿಗಳನ್ನು ಭಯಭೀತರನ್ನಾಗಿಸಿದೆ
ಮುಲ್ಕಿ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್ ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
Kshetra Samachara
18/09/2024 04:37 pm