ಮುಲ್ಕಿ:ಸರಕಾರಿ ನೌಕರರು ಉತ್ತಮ ಕರ್ತವ್ಯ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದರೆ ಜನ ಗುರುತಿಸುತ್ತಾರೆ ಎಂದು ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ ಹೇಳಿದರು.
ಅವರು ಪಂಚಾಯತ್ನಲ್ಲಿ ಕಳೆದ18 ವರ್ಷ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ಚೇಳಾಯರು ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡ ಸಿಬ್ಬಂದಿ ಸುರೇಶ್ ಕೊಲೆಕಾಡಿ ಯವರನ್ನು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಸದಸ್ಯರಾದ ಗೋಪಿನಾಥ ಪಡಂಗ, ಲೀಲಾವತಿ, ರಾಜೇಶ್, ಮಮತಾ ಶೆಟ್ಟಿ, ದಿನೇಶ್, ಲಲಿತಾ ಯಾದವ್,ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಮಂಜುನಾಥ್ ಸಿಬ್ಬಂದಿ ಯತೀಶ್ ಕೊಲಕಾಡಿ, ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/09/2024 07:48 am