ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಉತ್ತಮ ಆರೋಗ್ಯ ಉತ್ತಮ ಬದುಕಿಗೆ ಮಾರ್ಗ - ನ್ಯಾಯಾಧೀಶ ಅಬ್ದುಲ್ ಖಾದರ್

ಕುಂದಗೋಳ : ಆರೋಗ್ಯಕರ ಜೀವನಕ್ಕಾಗಿ ಪೌಷ್ಠಿಕ ಆಹಾರ ಸೇವನೆ ಅತ್ಯವಶ್ಯ. ನೀವೂ ಪೌಷ್ಠಿಕ ಆಹಾರ ಮತ್ತು ಸ್ವಚ್ಛತೆ ಕ್ರಮ ಅನುಸರಿಸಿದರೇ ಆರೋಗ್ಯವಾಗಿ ಇರುತ್ತೀರಿ ಎಂದು ಗೌರವಾನ್ವಿತ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.

ಅವರು ಕುಂದಗೋಳ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪೌಷ್ಠಿಕ ಆಹಾರ ವಿಶ್ವ ಪೌಷ್ಠಿಕಾಂಶ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ "ಉತ್ತಮ ಆರೋಗ್ಯ ಉತ್ತಮ ಬದುಕಿಗೆ ದಾರಿ" ಎಂದರು.

ಈ ವೇಳೆ 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಷನ ಮತ್ತು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯ, ಹಾಗೂ‌ ಮುದ್ದು ಹೆಣ್ಣು ಮಕ್ಕಳ ಜನ್ಮದಿನ ಆಚರಣೆ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಜರುಗಿತು.

ಬಳಿಕ ಗೌರವಾನ್ವಿತ ನ್ಯಾಯಾಧೀಶ ಅಬ್ದುಲ್ ಖಾದರ್ ಅವರು ಪೌಷ್ಠಿಕ ಆಹಾರ ಪ್ರದರ್ಶನ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಆಡಳಿತಾಧಿಕಾರಿ ಯು.ಸಿ.ಪಾಟೀಲ್, ವಿ.ಎಲ್‌.ಹಡಪದ, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಕಲಾ ಪ್ರಭಾಕರ, ವಕೀಲರಾದ ವಾಯ್.ಎಫ್.ಸಂಶಿ, ಜಿ.ಬಿ.ಸೊರಟೂರು, ಯು.ಎಮ್.ಪಾಟೀಲ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಮಶಾದಬೇಗಂ ಕಂದಗಲ್, ಹಿರಿಯ ಮೇಲ್ವಿಚಾರಕಿ ಪ್ರೇಮಲತಾ ಬಾಲರಡ್ಡಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Ashok M
Kshetra Samachara

Kshetra Samachara

06/09/2024 07:32 am

Cinque Terre

46.08 K

Cinque Terre

0

ಸಂಬಂಧಿತ ಸುದ್ದಿ