ಕುಂದಗೋಳ : ಡೆಂಗ್ಯೂ ದೃಢಪಟ್ಟಿದ್ದ 4 ವರ್ಷದ ಪೂರ್ಣಾ ಕರಿಯಪ್ಪಗೌಡ್ರ ಪಾಟೀಲ್ ಎಂಬ ಮಗುವೊಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಶುಕ್ರವಾರ) ಸಾವನ್ನಪ್ಪಿದೆ.
ಕುಂದಗೋಳ ತಾಲೂಕಿನ ಹಿರೇನೆರ್ತಿ ಗ್ರಾಮದ ಮಗುವು ಸಾವನ್ನಪ್ಪಿದೆ.
ಈ ಬಗ್ಗೆ ಕುಂದಗೋಳ ತಾಲೂಕು ಆರೋಗ್ಯಾಧಿಕಾರಿ ಡಾ.ಸೋಪಿಯಾ ದಾಸರಿ ಅವರನ್ನೂ ಕೇಳಿದ್ರೆ ಮಗು ಡೆಂಗ್ಯೂ ಕಾರಣ ಮೃತಪಟ್ಟ ಬಗ್ಗೆ ಯರಗುಪ್ಪಿ ವಲಯದ ವೈದ್ಯೆ ಡಾ.ಸಂಜನಾ ಅವರಿಗೆ ಮಾಹಿತಿ ಕೇಳಿದ್ದೇವೆ. ಇನ್ನೊಮ್ಮೆ ಮಗುವಿನ ಚಿಕಿತ್ಸೆ ವರದಿ ಪರೀಕ್ಷೆ ನಡೆಸಿ ಮಗುವಿನ ಸಾವಿಗೆ ನಿಖರ ಕಾರಣ ತಿಳಿಸುತ್ತೇವೆ ಎಂದಿದ್ದಾರೆ.
ಇನ್ನೂ ಯರಗುಪ್ಪಿ ವಲಯದ ವೈದ್ಯೆ ಡಾ.ಸಂಜನಾ ಅವರನ್ನು ಮಗುವಿನ ಸಾವಿನ ಕಾರಣ ಕೇಳಿದ್ರೆ ಮಗುವಿನ ಮನೆಗೆ ಹೋಗಿ ನಾನು ಸಹ ಮಗು ಭೇಟಿಯಾಗಿ ಬಂದಿದ್ದೆ. ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರ ಜೊತೆ ಚರ್ಚಿಸಿ ಮಗುವಿನ ಸಾವಿನ ಬಗ್ಗೆ ಸ್ಪಷ್ಟ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಒಟ್ಟಾರೆ ಕುಂದಗೋಳ ತಾಲೂಕಿನ ಹಸುಗೂಸೊಂದು ಡೆಂಗ್ಯೂನಂತಹ ಮಾರಕ ರೋಗಕ್ಕೆ ಬಲಿಯಾಯಿತೇ ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2024 01:56 pm