ಧಾರವಾಡ: ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಒಳಾಂಗಣದಲ್ಲಿ ನಡೆದ ಧಾರವಾಡ ಶಹರ ಪದವಿ-ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಶಾಂತಿನಿಕೇತನ (ಅರ್ಜುನ) ವಿಜ್ಞಾನ ಪದವಿ-ಪೂರ್ವ ಕಾಲೇಜು ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದೆ.
ಧಾರವಾಡದ ವಿದ್ಯಾರ್ಥಿಗಳಾದ ಕುಮಾರ, ಅನಮೋಲ್ ಪ್ರಭು, ಮಲ್ಲಿಕಾರ್ಜುನ ಅಕ್ಕಿ ಮತ್ತು ಕೃಪಾಲ ವಿಟೇಕರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮುಂಬರುವ ಪಂದ್ಯಗಳಿಗೆ ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.
Kshetra Samachara
07/09/2024 03:32 pm