ಹುಬ್ಬಳ್ಳಿ : ಅಂಗನವಾಡಿ ಆಹಾರ ಪೂರೈಕೆ ಮಾಡುವ MSPC ಸಂಘಗಳು ದಿಕಾನೇಕಾ....ದಾತ್ ಅಲಗ್ ... ಖಾನೆಕಾ ದಾತ್ ಅಲಗ್ ಅನ್ನುವಂಗ ಅದಾವ್... ಈ MSPC ಗಳು ಹೆಸರಿಗೆ ಮಾತ್ರ ಸ್ವಸಹಾಯ ಗುಂಪಿನಿಂದ ನಡಿತ್ತಾವ್... ಆದ್ರ ಇಡಿ ಧಾರವಾಡ ಜಿಲ್ಲೆಗೆ ಒಬ್ಬರೇ ಬೆಲ್ಲ ಕಳಿಸುತ್ತಾರೇ... ತೊಗರಿ ಕಳಿಸುತ್ತಾರೇ.... ಮಸಾಲೆ ಕಳಿಸುತ್ತಾರೆ.... ಹಿಟ್ಟು ಕಳಿಸುತ್ತಾರೆ....ಇದು ಹೆಂಗ್...
ಮತ್ ಇವರು ಯಾವ ಕಳಪೆ ಆಹಾರ ಬಂದ್ರು ಪರಿಶೀಲಿಸುವುದಿಲ್ಲ... ಅದೇ ರೀತಿ ಮೇಲಧಿಕಾರಿಗಳು ಹಂಗ ಮಾಡತ್ತಾರ್... ನಾವು ನಿನ್ನೆ ದಾಳಿ ಮಾಡುವಕ್ಕಿಂತ ಮುಂಚೆಕ್ ಸರಕಾರಿ ಅಧಿಕಾರಿ ಇದೆ ತಾರಿಹಾಳ ಕೈಗಾರಿಕಾ ಪ್ರದೇಶದ MSPC ಗೆ ಬೇಟಿ ನೀಡಿ ಎಲ್ಲಾ ಸರಿ ಇದೆ ಅಂತ್ ಹೊಂಟಿದ್ರ್....
ಇಷ್ಟೇಲ್ಲ ಅಧಿಕಾರಿಗಳು ಅತ್ಯಂತ ಗುಪ್ತವಾಗಿ ಪ್ರಮಾಣಕವಾಗಿ ಸಪೋರ್ಟ್ ಮಾಡಾತ್ತಾರ್ ಅಂದ್ರ ಇದರ ಹಿಂದ ರಾಜಕೀಯ ವಾಸನೆ ಇರೊದು 100% ಪಕ್ಕಾ..... ವಾಸನಿ ಅಷ್ಟ ಅಲ್ಲ ಇದು ಒಂದು ದೊಡ್ಡ ಮಾಫಿಯಾ.. ನ ಐತಿ....
ಮಾನ್ಯ ಮತದಾರರ ಪ್ರಭುಗಳೇ ನಿಮ್ಮ ರೊಕ್ಕದಾಗ ನಿಮ್ಮಗ ಮಣ್ಣ ತಿನ್ನಸಾಕತ್ತಾರ್... ಸರಕಾರದವರು...
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2024 12:06 pm