ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಾಜ್ಯೋತ್ಸವದಂದೆ ಸೈಕಲ್ ರ್ಯಾಲಿಗೆ ಕರೆ ನೀಡಿದ ಎಂಇಎಸ್

ಬೆಳಗಾವಿ: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ವೇಳೆ ಕರಾಳ ದಿನ ಆಚರಣೆಗೆ ಅವಕಾಶ ನಿಡಲು ಜಿಲ್ಲಾಡಳಿತದ ನಿರಾಕರಣೆ ಮಾಡಿದೆ. ಆದರೆ ಎಂಇಎಸ್ ಪುಂಡರು ಕರಾಳದಿನ ಆಚರಣೆಗೆ ಮುಂದಾಗಿದ್ದಾರೆ.

ಕರಾಳ ದಿನ ಆಚರಣೆಗೆ ಪದೆ ಪದೆ ಮಿಟಿಂಗ್ ಮಾಡುತ್ತಿರುವ ಎಂಇಎಸ್, ಸರ್ಕಾರದ ವಿರುದ್ಧ ರಾಜ್ಯೋತ್ಸವದಂದೆ ಸೈಕಲ್ ರ್ಯಾಲಿಗೆ ಕರೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಕರಾಳ ದಿನ ಆಚರಣೆಗೆ ಅವಕಾಶ ನಿರಾಕರಣೆ ಮಾಡದರು. ಇದರ ಬೆನ್ನಲ್ಲೆ ಮಹಾರಾಷ್ಟ್ರಕ್ಕೆ ಹೋಗಿದ್ದ ಎಂಇಎಸ್ ಪುಂಡರು, ಅಲ್ಲಿಯ ನಾಯಕರನ್ನು ಭೇಟಿ ಮಾಡಿ, ನವೆಂಬರ್ 1 ಕ್ಕೆ ಬೆಳಗಾವಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಹಾಗಾಗಿ ಮಹಾರಾಷ್ಟ್ರದ ನಾಯಕರು ಬರ್ತಾರೆ ಸೈಕಲ್ ಜಾಥಾ ಮಾಡೋಣ ಎಂದು ಕರೆ ನೀಡಿದ್ದಾರೆ.‌ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಲಿ ಬಿಡಲಿ ನಾವು ರ್ಯಾಲಿ ಮಾಡೋಣ ಎಂದು ಬೆಳಗಾವಿಯ ಮರಾಠಾ ಮಂಗಳ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Edited By : Ashok M
PublicNext

PublicNext

22/10/2024 11:44 am

Cinque Terre

9.23 K

Cinque Terre

2

ಸಂಬಂಧಿತ ಸುದ್ದಿ