ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವ ಕುರಿ ಹನುಮಂತ ಮೊದಲ ದಿನವೇ ಮನರಂಜನೆ ನೀಡಲು ಶುರು ಮಾಡಿದ್ದಾರೆ. ಹಳ್ಳಿಯಿಂದ ಬಿಗ್ ಬಾಸ್ ವೇದಿಕೆಗೆ ಬಂದಿರುವ ಗಾಯಕ ಹನುಮಂತ, ಮನೆಗೆ ಬಂದ ಕೂಡಲೇ ಎಲ್ಲರೊಂದಿಗೆ ಬೆರೆಯಲು ಆರಂಭಿಸಿದ್ದಾರೆ. ಮೊದಲ ದಿನವೇ "ಮುಗ್ಧ ಹನುಮ"ನಿಗೆ ಮನೆಯ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲಾಗಿದೆ! ಮನೆಯ ಸದಸ್ಯರಿಗೆ ಮನೆಲಸ ಹಂಚಿರುವ ಹನುಮಂತನಿಗೆ ಬಿಗ್ ಬಾಸ್ ಒಂದು ಸ್ಪೆಷಲ್ ಟಾಸ್ಕ್ ಕೂಡ ನೀಡಿದ್ದಾರೆ.
ಹನುಮಂತ, ಯಾವ ಸದಸ್ಯನು ಯಾವ ಸ್ಥಾನದಲ್ಲಿರಬೇಕೆಂದು ನಿರ್ಧರಿಸಬೇಕು. ಹನುಮಂತ ತಮಗೆ ತಿಳಿದಂತೆ ಒಬ್ಬೊಬ್ಬರನ್ನು ಒಂದೊಂದು ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದಕ್ಕೆ ಚೈತ್ರಾ ತಮಗೆ ಕೊಟ್ಟ 13ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವ್ಯಾ ನನಗೆ 7ನೇ ಸ್ಥಾನ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ್ದು, ಈ ವೇಳೆ ಹನುಮಂತ ನಮ್ರತೆಯಿಂದ "ನನಗೆ ಗೊತ್ತಿಲ್ಲ ಅಕ್ಕಾ" ಎಂದಿದ್ದಾರೆ.
ಧರ್ಮ ಕೀರ್ತಿರಾಜ್ ತಮಗೆ ಕೊಟ್ಟ 9ನೇ ಸ್ಥಾನಕ್ಕೆ ಗರಂ ಆಗಿದ್ದು, ತಾವು ಇಲ್ಲಿ ಲವ್ ಮಾಡೋಕೆ, ಚಪಾತಿ ಬೇಯಿಸೋಕೆ ಬಂದಿರುವುದಲ್ಲ ಎಂದಿದ್ದಾರೆ. ಇದಕ್ಕೆ ದಿಕ್ಕು ತೋಚದ ಹನುಮಂತು ಏನು ಮಾಡುವುದೆಂದು ತಲೆ ಮೇಲೆ ಕೈಕೊಟ್ಟು ಕೂತಿದ್ದಾರೆ. "ಹೀಗೆ ಜಗಳ ಮಾಡೋದಾದ್ರೆ ನಾನು ಬರ್ತಾನೇ ಇರಲಿಲ್ಲ. ನಾನು ಈ ಆಟದಲ್ಲಿ ಇಲ್ಲ, ಕ್ಯಾಪ್ಟನ್ ಕ್ಯಾನ್ಸಲ್" ಎಂದು ಹನುಮಂತ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
PublicNext
21/10/2024 06:04 pm