ಖಾನಾಪುರ : ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ನಿರಂತರ ಮಳೆ ಹಿನ್ನೆಲೆಯಲ್ಲಿ ಒಂದೇ ಸಾಲಿನಲ್ಲಿದ್ದ ಅಕ್ಕಪಕ್ಕದ ಮೂರು ಮನೆಗಳು ಕುಸಿದು ಬಿದ್ದಿರುವ ಘಟನೆ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಮ್ಮಾರ ಓಣಿಯ ವೀರಭದ್ರ ಕಮ್ಮಾರ್, ಮಹಾದೇವ ನಾಗಣ್ಣವರ, ಮಹಾಂತೇಶ ನಾಗಣ್ಣವರ ಎಂಬುವವರಿಗೆ ಸೇರಿದ ಮನೆಗಳೇ ಕುಸಿದು ಬಿದ್ದಿವೆ. ಒಂದೊಂದು ಗೋಡೆ ಮತ್ತೊಂದು ಮನೆಗಳ ಮೇಲೆ ಬಿದ್ದ ಪರಿಣಾನ ಒಂದೇ ಸಾಲಿನಲ್ಲಿದ್ದ ಮೂರು ಮನೆಗಳು ಕುಸಿದಿವೆ.
ಗೋಡೆ ಕುಸಿಲಾರಂಭಿಸುತ್ತಿದ್ದಂತೆ ಮನೆಗಳಲ್ಲಿದ್ದವರು ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೊಡಚವಾಡ ಗ್ರಾಪಂ ಸದಸ್ಯರುಗಳು, ಗ್ರಾಮಲೆಕ್ಕಾಧಿಕಾರಿ ಮತ್ತು ಕೊಡಚವಾಡ ಗ್ರಾಪಂ ಪಿಡಿಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವರದಿ ನಾಗೇಶ ನಾಯ್ಕರ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
22/10/2024 02:48 pm