ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೃದಯಾಘಾತ ಆದಾಗ ಏ‌ನು ಮಾಡಬೇಕು, ಇಲ್ಲಿದೆ‌ ಬೆಸ್ಟ್ ಸೆಲ್ಯೂಷನ್..!

ಬೆಂಗಳೂರು: ವಿಶ್ವ ಹೃದಯ ದಿನ 2022 ಅಂಗವಾಗಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹೃದಯ ವಿಜ್ಞಾನ ತಂಡದಿಂದ ಹೃದಯಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಅನೇಕ ಜೀವಗಳನ್ನು ಉಳಿಸಲು ಮತ್ತು ಹೃದಯ ಕಾಯಿಲೆಗಳನ್ನು ತಡೆಗಟ್ಟಲು, ಅದರ ಬದ್ಧತೆಯನ್ನು ಬಲಪಡಿಸಲು ಸಭೆ ಆಯೋಜಿಸಲಾಗಿತ್ತು. ವೈದ್ಯರ 2022ರ ದತ್ತಾಂಶದ ಪ್ರಕಾರ [ಸಾಂಕ್ರಾಮಿಕ ನಂತರ] ಸುಮಾರು ಶೇ 30 ರಷ್ಟು ರೋಗಿಗಳು ಶೇ 40 ಕ್ಕಿಂತ ಕಡಿಮೆ ವಯೋಮಿತಿಯವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ಕಳವಳಕಾರಿ ಅಂಕಿ ಅಂಶ ಹೃದಯದ ಸ್ವಯಂ ಆರೈಕೆ ಬಗ್ಗೆ ಜನರಲ್ಲಿ ಸ್ವಯಂ ಪ್ರೇರಣೆಯಿಂದ ಜಾಗೃತಿ ಮೂಡಿಸಲಿದೆ.

ಹೃದಯ ಸ್ನಾಯುಗಳಿಗೆ ರಕ್ತ ಪೂರೈಸುವ ಪರಿಧಮನಿಯ ಅಪಧಮನಿಗಳು ಹಠಾತ್ ಸಂಪೂರ್ಣ ಮುಚ್ಚಲ್ಪಟ್ಟಾಗ ಹೃದಯಾಘಾತ ಸಂಭವಿಸುತ್ತದೆ. ನೀವು ಹೃದಯಾಘಾತಕ್ಕೆ ಒಳಗಾದರೆ ವೈದ್ಯರು ಆಂಜಿಯೋಪ್ಲಾಸ್ಟಿ ಎಂಬ ತುರ್ತು ವಿಧಾನ ಅನುಸರಿಸುತ್ತಾರೆ. ಈ ಚಿಕಿತ್ಸೆ ಅಥವಾ ಕಾರ್ಯವಿಧಾನ ಕಿರಿದಾದ ಇಲ್ಲವೆ ನಿರ್ಬಂಧಿಸಿದ ರಕ್ತನಾಳಗಳನ್ನು ತೆರೆಯಲು ಸಹಕಾರಿಯಾಗಲಿದೆ. ಸಾಮಾನ್ಯವಾಗಿ ವೈದ್ಯರು ಸ್ಟೆಂಟ್ ಎಂದು ಕರೆಯಲ್ಪಡುವ ಸಣ್ಣ ಲೋಹದ ಮೆಶ್ ಟ್ಯೂಬ್ ಅನ್ನು ಅಪಧಮನಿಯಲ್ಲಿ ಇರಿಸುವುದರಿಂದ ಇದು ತೆರೆದುಕೊಳ್ಳುತ್ತದೆ. ಎಂದು ಹಲವಾರು ಹಾರ್ಟ್ ಸಂಭಂದಪಟ್ಟ ವಿಷಯಗಳ ಕುರಿತು ತಿಳಿಸಿಕೊಡಲಾಯಿತು.

Edited By : Shivu K
PublicNext

PublicNext

28/09/2022 10:42 pm

Cinque Terre

55.49 K

Cinque Terre

0

ಸಂಬಂಧಿತ ಸುದ್ದಿ