ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಡೆಂಘಿ ಅಬ್ಬರ ಹೆಚ್ಚುತ್ತಿದ್ದು ಆರೋಗ್ಯ ಸಚಿವರಿಂದ ಇಂದು ಸಿಟಿ ರೌಂಡ್ಸ್ ಮಾಡಲಾಯಿತು. ಯಲಹಂಕ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಸುತ್ತಮುತ್ತ ರೌಂಡ್ಸ್ ಮಾಡಿದ್ದು ಆರೋಗ್ಯ ಕಾರ್ಯಕರ್ತೆಯರ ಜೊತೆ ಮನೆ ಮನೆ ಸರ್ವೆಯಲ್ಲಿ ಭಾಗಿಯಾದ್ರು. ಊರಿನ ಪ್ರಮುಖ ರಸ್ತೆಗಳಲ್ಲಿ ಜಾಥಾ ಮಾಡಿ ಜಾಗೃತಿ ಮೂಡಿಸಿದ ಸಚಿವರಿಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಸಾಥ್ ಕೊಟ್ರು. ಮನೆ ಮನೆಗೆ ಭೇಟಿ ನೀಡಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸಿದ್ದು ಮಾತ್ರವಲ್ಲದೇ ಶಾಲಾ ಮಕ್ಕಳಿಗೆ ಡೆಂಘಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
PublicNext
26/07/2024 03:18 pm